ಇಂಗಳಗೊಂದಿ : ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಜಯಪ್ಪ ಕುಟುಂಬಕ್ಕೆ ನೆರವು

ಇಂಗಳಗೊಂದಿ :  ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಜಯಪ್ಪ ಕುಟುಂಬಕ್ಕೆ ನೆರವು

ಮಲೇಬೆನ್ನೂರು, ಜು.23-  ಎಮ್ಮೆ ಮೈ ತೊಳೆಯುತ್ತಿರುವಾಗ ಯುವಕನೋರ್ವ ಕಾಲು ಜಾರಿ ಬಿದ್ದು ತುಂಗಭದ್ರಾ ನದಿಯಲ್ಲಿ ಸಾವನ್ನಪ್ಪಿದ ಘಟನೆ ಶನಿವಾರ ಇಂಗಳಗೊಂದಿ  ಗ್ರಾಮದಲ್ಲಿ ನಡೆದಿದೆ. 

ಗ್ರಾಮದ ಶ್ರೀಮತಿ ವಿಮಲಮ್ಮ ನವರ ಮಗ ಜಯಪ್ಪ (35 ವರ್ಷ) ಮೃತಪಟ್ಟ ಯುವಕನಾಗಿದ್ದಾನೆ.

ದುಡಿಯುವ ಮಗನನ್ನು ಕಳೆದುಕೊಂಡು ಕಂಗಾಲಾಗಿರುವ ಮೃತ ಜಯಪ್ಪ ನವರ ತಾಯಿಗೆ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಸಾಂತ್ವನ ಹೇಳಿ ವೈಯಕ್ತಿಕ ನೆರವು ನೀಡಿದರು. 

ಅಲ್ಲದೆ,  ಸರ್ಕಾರದಿಂದಲೂ ಅಗತ್ಯ ನೆರವು ಕೊಡಿಸುವ ಭರವಸೆ ನೀಡಿದ್ದಾರೆ.

error: Content is protected !!