ಹರಿಹರದಲ್ಲಿ ಸಂಭ್ರಮದ ಗುರು ಪೂರ್ಣಿಮೆ

ಹರಿಹರದಲ್ಲಿ ಸಂಭ್ರಮದ ಗುರು ಪೂರ್ಣಿಮೆ

ಹರಿಹರ, ಜು.22- ನಗರದ ಕೇಶವ ನಗರದ, ಪಟೇಲ್ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ 8ನೇ ವರ್ಷದ ಗುರು ಪೌರ್ಣಿಮೆ ಪ್ರಯುಕ್ತ ಶ್ರೀ ಶಿರಡಿ ಸಾಯಿಬಾಬಾ ಸ್ವಾಮಿಗೆ ವಿಶೇಷ ಪೂಜೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಮೂಹಿಕ ಕ್ಷೀರಾಭಿಷೇಕ ಕಾರ್ಯವು ಶ್ರದ್ಧಾ ಭಕ್ತಿಯಿಂದ ನಡೆಯಿತು. 

ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ ಇತರರು ಪೂಜೆಯಲ್ಲಿ ಪಾಲ್ಗೊಂಡು ಸಾಯಿಬಾಬಾ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಶ ಸಮಿತಿಯ ಅಧ್ಯಕ್ಷ ಬಸವರಾಜ್ ಪಾಟೀಲ್ ಸಮಿತಿಯ ಗೌರವ ಅಧ್ಯಕ್ಷ ಶಂಕರ್ ಖಟಾವ್ಕರ್, ಉಪಾಧ್ಯಕ್ಷರಾದ ಗುರುಪ್ರಸಾದ್, ಸುರ್ವೆ ಹನುಮಂತಪ್ಪ, ಕಾರ್ಯದರ್ಶಿ ವಾಗೀಶ್ ಪಾಟೀಲ್, ಸಹ ಕಾರ್ಯದರ್ಶಿ ಚಂದ್ರಶೇಖರ್ ಸರಫದ್, ಖಜಾಂಚಿ ಜೆ.ಎಂ. ಲಿಂಗರಾಜ್ ಪಟೇಲ್, ಉಪ ಖಜಾಂಚಿ ಪಿ.ಕೆ. ಸತೀಶ್ ಪಾಟೀಲ್, ಕಾನೂನು ಸಲಹೆಗಾರ ಎನ್.ಪ್ರಕಾಶ್, ಲೆಕ್ಕ ಪರಿಶೋಧಕ ಶಶಿಧರ್ ಡಿ. ಆನ್ವೇರಿ, ಸದಸ್ಯರಾದ ಗೋಪಾಲ್ ರಾವ್, ಮಾದೇವಪ್ಪ, ಡಿ.ಸರಾಫದ್, ಪ್ರಕಾಶ್ ಜಿ.ಎಸ್., ಎಸ್.ಎಸ್.ಸಂಗನಾಳಮಠ್, ಬಿ. ದೊರೆಸ್ವಾಮಿ, ಹೆಚ್. ಮಂಜುನಾಥ್, ಭೀಮಣ್ಣ ಐರಣಿ, ವೀರಪ್ಪ ನಿಂಗಪ್ಪ ಕುದ್ರಿ, ಪ್ರಧಾನ ಅರ್ಚಕರಾದ ಕುಮಾರ್ ಸ್ವಾಮಿ ಹಿರೇಮಠ, ಆಂಜನೇಯ, ಅಂಜಿನಪ್ಪ, ಶಿವಕುಮಾರ್ ಮಲೇಬೆನ್ನೂರು, ವಾಸು ಕುಂಬಳೂರು, ಜಿಗಳಿ ಪ್ರಕಾಶ್ ಇತರರು ಹಾಜರಿದ್ದರು.

error: Content is protected !!