ಕುದಿಸಿ, ಆರಿಸಿದ ನೀರನ್ನು ಬಳಸಲು ಸೂಚನೆ

ಹರಿಹರ, ಜು. 21- ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣ ನದಿಯ ನೀರು ಕೆಸರಿನಿಂದ ಕೂಡಿರುತ್ತದೆ. ನೀರನ್ನು ಶುದ್ಧಗೊಳಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ನೀರು ಸರಬರಾಜಿನಲ್ಲಿ ವಿಳಂಬ ವಾಗುತ್ತದೆ. ನೀರಿನಲ್ಲಿ ಕೆಸರಿನಿಂದ ಟರ್ಬಿಡಿಟಿ ಪ್ರಮಾಣ ಹೆಚ್ಚಾದಲ್ಲಿ ನೀರನ್ನು ಶುದ್ಧಗೊಳಿಸುವ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸಾಧ್ಯವಾದಷ್ಟು ನೀರನ್ನು ಸಂಗ್ರಹಿಸಿಕೊಳ್ಳಬೇಕು. ಕಡ್ಡಾಯವಾಗಿ ಕುದಿಸಿ, ಆರಿಸಿದ ನೀರನ್ನು ಕುಡಿಯಲು ಸೂಚಿಸಿದೆ. 

ನೀರನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸುವಂತೆ ಹರಿಹರ ನಗರಸಭೆ ಪೌರಾಯುಕ್ತರು ಕೋರಿದ್ದಾರೆ. 

error: Content is protected !!