ನಗರದ ದತ್ತಾತ್ರೇಯ ದೇವಾಲಯದಲ್ಲಿ ನಾಳೆ ವಿಶೇಷ ಪೂಜೆ

ನಗರದ ದತ್ತಾತ್ರೇಯ ದೇವಾಲಯದಲ್ಲಿ ನಾಳೆ ವಿಶೇಷ ಪೂಜೆ

ದಾವಣಗೆರೆ, ಜು.19ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥಗುರು ಅಧ್ಯಾತ್ಮ ಮಂದಿರ, ಶ್ರೀ ಗುರು ದತ್ತಾತ್ರೇಯ ದೇವಾಲಯದಲ್ಲಿ ಶ್ರೀ ಗುರು ದತ್ತಾತ್ತೇಯ ಸ್ವಾಮಿಯ 38ನೇ ವಾರ್ಷಿಕೋತ್ಸವ ಪ್ರತಿಷ್ಠಾಪನಾ ಸುಸ್ಮರಣ ಮತ್ತು 108ನೇ ಶ್ರೀ ಸತ್ಯದತ್ತ ವ್ರತ ಮಹೋತ್ಸವ ಕಾರ್ಯಕ್ರಮವು ನಾಡಿದ್ದು ದಿನಾಂಕ 21ರ ಭಾನುವಾರ ನಡೆಯಲಿದೆ.

 ಕಾಕಡಾರತಿ, ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಬೆಳಿಗ್ಗೆ 10 ರಿಂದ 108 ಕಳಶಗಳ ಶ್ರೀ ಸತ್ಯದತ್ತವ್ರತ ಪೂಜಾ, ನಂತರ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ 2 ರಿಂದ ಭಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

error: Content is protected !!