ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ವಾರ್ಷಿಕೋತ್ಸವ

ಬಾಡಾ ಕ್ರಾಸ್‌ನಲ್ಲಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಸಾಧನ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್‌ನ ವಾರ್ಷಿಕೋತ್ಸವ, ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಇಂದು ಏರ್ಪಡಿಸಲಾಗಿದೆ.

ಬೆಳಿಗ್ಗೆ 11.30ಕ್ಕೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಬಸವಪ್ರಭು  ಸ್ವಾಮೀಜಿ ವಹಿಸಲಿದ್ದಾರೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಸಾಧನ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್‌ನ ರಾಜ್ಯಾಧ್ಯಕ್ಷರಾದ ಡಾ. ಪುಷ್ಪಲತಾ ಪವಿತ್ರರಾಜ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹೆಚ್.ಎಸ್. ನಾಗರಾಜ್, ಯುಗಧರ್ಮ ರಾಮಣ್ಣ, ಡಾ.ಸೈಯದ್, ದೊಡ್ಡಬಾತಿ ರವಿಕುಮಾರ್, ಅಥಣಿ ವೀರಣ್ಣ, ಜೆ.ಎನ್. ಕರಿಬಸಪ್ಪ ಜಾಲಿಮರದ, ಮಹಾಂತೇಶ್ ಒಣರೊಟ್ಟಿ, ಸೋಗಿ ಶಾಂತಕುಮಾರ್, ಬಾಡದ ಆನಂದರಾಜ್, ಅನ್ವರ್‌ ಭಾಷಾ, ಜರೀಕಟ್ಟೆ ಹನುಮಂತಪ್ಪ, ರಶ್ಮಿ ನಾಗರಾಜ್ ಕುಂಕೋದ್, ಭರಮಸಾಗರ ಮಂಜುನಾಥ, ಜಗನ್ನಾಥ ಉಪಸ್ಥಿತರಿರುವರು.

error: Content is protected !!