ಹರಿಹರದ ಸಾಯಿಬಾಬಾ ಮಂದಿರದಲ್ಲಿ ನಾಳೆ ವಿಶೇಷ ಪೂಜೆ

ಹರಿಹರದ ಸಾಯಿಬಾಬಾ ಮಂದಿರದಲ್ಲಿ ನಾಳೆ ವಿಶೇಷ ಪೂಜೆ

ಹರಿಹರ, ಜು. 19- ನಗರದ ಪಟೇಲ್ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಾಡಿದ್ದು ದಿನಾಂಕ 21ರ ಭಾನುವಾರ ಗುರುಪೌರ್ಣಿಮೆ ಪ್ರಯುಕ್ತ ಶ್ರೀ ಶಿರಡಿ ಸಾಯಿಬಾಬಾ ಸ್ವಾಮಿಗೆ ವಿಶೇಷ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮತಿ ಗಂಗಮ್ಮ ಪಟೇಲ್ ಮಲ್ಲಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಜಿ. ಬಸವರಾಜ್ ಪಟೇಲ್ ತಿಳಿಸಿದರು.

ಅಂದು ಬೆಳಗ್ಗೆ 6-30 ಕ್ಕೆ ಶ್ರೀ ಸಿದ್ದಿ ವಿನಾಯಕ, ಶ್ರೀ ಸಾಯಿಬಾಬಾ  ಮೂರ್ತಿಗೆ, ಶ್ರೀ ಕಾಶಿ ವಿಶ್ವನಾಥ, ಬಸವೇಶ್ವರ ಹಾಗೂ ನವಗ್ರಹ ಮೂರ್ತಿಗಳಿಗೆ ಸಾರ್ವಜನಿಕರಿಂದ ಕ್ಷೀರಾಭಿಷೇಕ, ವಿಶೇಷ ಅಲಂಕಾರ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮಧ್ಯಾಹ್ನ 12-30 ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಸಲಾಗುತ್ತದೆ.  

ಈ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷ ಶಂಕರ್ ಖಟಾವ್ಕರ್, ಉಪಾಧ್ಯಕ್ಷ ಗುರುಪ್ರಸಾದ್, ಸುರ್ವೆ ಹನುಮಂತಪ್ಪ, ಕಾರ್ಯದರ್ಶಿ ವಾಗೀಶ್ ಪಾಟೀಲ್, ಸಹ ಕಾರ್ಯ ದರ್ಶಿ ಚಂದ್ರಶೇಖರ್ ಸರಫದ್, ಖಜಾಂಚಿ ಜೆ.ಎಂ. ಲಿಂಗರಾಜ್ ಪಟೇಲ್, ಉಪ ಖಜಾಂಚಿ ಪಿ.ಕೆ. ಸತೀಶ್ ಪಟೇಲ್, ಕಾನೂನು ಸಲಹೆಗಾರ ಎನ್. ಪ್ರಕಾಶ್, ಲೆಕ್ಕ ಪರಿಶೋಧಕ ಶಶಿಧರ್ ಡಿ. ಆನ್ವೇರಿ, ಸದಸ್ಯರಾದ ಗೋಪಾಲ್ ರಾವ್, ಮಾದೇವಪ್ಪ, ಡಿ ಸರಾಫದ್, ಪ್ರಕಾಶ್ ಜಿ.ಎಸ್., ಎಸ್ ಎಸ್. ಸಂಗನಾಳಮಠ್, ಬಿ. ದೊರೆಸ್ವಾಮಿ, ಹೆಚ್. ಮಂಜುನಾಥ್, ಭೀಮಣ್ಣ ಐರಣಿ, ವೀರಪ್ಪ ನಿಂಗಪ್ಪ ಕುದರಿ, ಪ್ರಧಾನ ಅರ್ಚಕ  ಕುಮಾರ ಸ್ವಾಮಿ ಹಿರೇಮಠ ಇತರರು ಹಾಜರಿದ್ದರು.

error: Content is protected !!