ದೇವರಬೆಳಕೆರೆ : ಸಂಗೀತ ಕಾರ್ಯಕ್ರಮ

ದೇವರಬೆಳಕೆರೆ : ಸಂಗೀತ ಕಾರ್ಯಕ್ರಮ

ಹರಿಹರ, ಜು. 18 – ತಾಲ್ಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ಹಿಂದೂ – ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಪವಿತ್ರ ಮೊಹರಂ ಹಬ್ಬವನ್ನು ಆಚರಿಸಲಾಯಿತು.

ಮೊಹರಂ ಹಬ್ಬದ ಕತ್ತಲ ರಾತ್ರಿಯ ಕೆಂಡಸೇವೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಾವಣಗೆರೆಯ ಶ್ರೀ ಗುರು ಹವ್ಯಾಸಿ ಕಲಾವೃಂದದ ಕಲಾವಿದ ಜಿ. ಶಂಭುಲಿಂಗಪ್ಪ ಮತ್ತು ತಂಡದಿಂದ ಸುಗಮ ಸಂಗೀತ ಮತ್ತು ಜಾನಪದ ಮನೋರಂಜನೆ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಬುಕ್ಕಸಾಗರ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮೀಜಿ, ಆವರಗೊಳ್ಳದ  ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ದರ್ಗಾದ ಹಜರತ್ ಸೈಯದ್ ಚಮನ್‌ ಸಾಬ್ ಮತ್ತು ಹಳೇ ಕುಂದುವಾಡದ ಶ್ರೀ ಕರಿಬಸವೇಶ್ವರ ದೇವಸ್ಥಾನದ ರಾಜಣ್ಣ, ದರ್ಗಾ ಅಧ್ಯಕ್ಷ ಜಯ್ಯಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮೊಹರಂ ಹಬ್ಬದ ಆಚರಣೆಗಳು ಜನರ ನಡುವೆ ಕೋಮು – ಸೌಹಾರ್ದತೆ ಮತ್ತು ಹೊಂದಾಣಿಕೆ ಮಾಡಿಕೊಂಡು ಬಾಳುವ ಯೋಗ್ಯತೆಯನ್ನು ಸೃಷ್ಟಿ ಮಾಡುತ್ತವೆ ಎಂದು ಆವರಗೊಳ್ಳ ಶ್ರೀಗಳು ಆಶೀವರ್ಚನ ನೀಡಿದರು.

error: Content is protected !!