22ರಂದು ನಗರದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆ

ದಾವಣಗೆರೆ, ಜು.17- ಭದ್ರಾ ಆಣೆಕಟ್ಟಿನಿಂದ ಅಚ್ಚುಕಟ್ಟು ಪ್ರದೇಶ ಗಳಿಗೆ ಮಳೆಗಾಲದ ಬೆಳೆಗೆ ನೀರು ಹರಿಸುವ ಬಗ್ಗೆ ಸಭೆಯನ್ನು ಇದೇ ದಿನಾಂಕ 22ರ ಸೋಮವಾರ ಮಧ್ಯಾ ಹ್ನ 12.30ಕ್ಕೆ ನಗರದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣ ದಲ್ಲಿ ಕರೆಯಲಾಗಿದೆ.  ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಗೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಭಾಗವಹಿಸುವಂತೆ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್. ಲಿಂಗರಾಜ್ ಕೋರಿದ್ದಾರೆ.

error: Content is protected !!