ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾಗಿ ನಾಗರಾಜ್ ಬಡದಾಳ್

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾಗಿ ನಾಗರಾಜ್ ಬಡದಾಳ್

ದಾವಣಗೆರೆ, ಜು.16- ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾಗಿ ಕನ್ನಡಪ್ರಭ ಹಿರಿಯ ವರದಿಗಾರ ನಾಗರಾಜ ಎಸ್.ಬಡದಾಳ್ ಆಯ್ಕೆಯಾಗಿದ್ದಾರೆ.

ವರದಿಗಾರರ ಕೂಟದ ಕಚೇರಿಯಲ್ಲಿ   ಕೂಟದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ನಾಗರಾಜ ಬಡದಾಳ್ 29 ಮತಗಳ ಅಂತರದಿಂದ ಜಯ ಗಳಿಸಿದರು. 

ನಾಗರಾಜ್ ಬಡದಾಳ್ 74 ಮತಗಳನ್ನು ಗಳಿಸಿ ಚುನಾಯಿತರಾದರೆ, ಅವರ ಪ್ರತಿಸ್ಪರ್ಧಿಯಾಗಿದ್ದ ಸುವರ್ಣ ಟಿವಿ ಹಿರಿಯ ವರದಿಗಾರ ಡಾ. ಸಿ. ವರದರಾಜ್ 45, ದಾವಣಗೆರೆ ಕನ್ನಡಿಗ ಸಂಪಾದಕ ಆರ್. ರವಿ 36 ಮತ ಪಡೆದು ಪರಾಭವಗೊಂಡರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಒಟ್ಟು ಐವರಲ್ಲಿ ಮಧು ನಾಗರಾಜ್ ಮತ್ತು ಹೆಚ್.ಎಂ.ಪಿ.ಕುಮಾರ್ ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಿ ಕಣದಿಂದ ಹಿಂದಕ್ಕೆ ಸರಿದಿದ್ದರು. ಒಟ್ಟು 164 ಮತದಾರರಲ್ಲಿ 156 ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಿದರು. ಒಂದು ಮತ ತಿರಸ್ಕೃತಗೊಂಡಿತ್ತು.

ಚುನಾವಣಾಧಿಕಾರಿ ಕನ್ನಡ ಭಾರತಿ ಸಂಪಾದಕ ಮಲ್ಲಿಕಾರ್ಜುನ್ ಕಬ್ಬೂರು ಫಲಿತಾಂಶ ಪ್ರಕಟಿಸಿದರು. ಸಂಯುಕ್ತ ಕರ್ನಾಟಕ ವರದಿಗಾರ ಡಿ. ರಂಗನಾಥ್‌ ರಾವ್ ಸಹಾಯಕ ಚುನಾವಣಾಧಿಕಾರಿಯಾಗಿದ್ದರು. ಜನತಾವಾಣಿ ವರದಿಗಾರ ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ ಚುನಾವಣಾಧಿಕಾರಿಗಳಿಗೆ ಸಹಕರಿಸಿದರು.

error: Content is protected !!