ರಸ್ತೆ ಅಪಘಾತದಲ್ಲಿ ರಾಜನಹಳ್ಳಿ ಸ್ವಾಮೀಜಿ ಕಾರು ಚಾಲಕನ ಸಾವು

ರಸ್ತೆ ಅಪಘಾತದಲ್ಲಿ ರಾಜನಹಳ್ಳಿ ಸ್ವಾಮೀಜಿ ಕಾರು ಚಾಲಕನ ಸಾವು

ಮಲೇಬೆನ್ನೂರು, ಜು.16- ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳ ವಾಹನ ಚಾಲಕ ನಾಗಯ್ಯ (38) ಚಿಕಿತ್ಸೆ ಫಲಕಾರಿಯಾಗದೇ  ಇಂದು ಬೆಳಗ್ಗೆ ದಾವಣಗೆರೆಯ ಎಸ್.ಎಸ್.ಆಸ್ಪತ್ರೆಯಲ್ಲಿ ನಿಧನರಾದರು.  ಹರಿಹರ ನಗರದ ಮುಖ್ಯ ರಸ್ತೆಯನ್ನು ದಾಟುವಾಗ ಆಕಸ್ಮಿಕವಾಗಿ ಕೆಎಸ್ಆರ್‌ಟಿಸಿ ಬಸ್‌ಗೆ ಸಿಲುಕಿ ನಾಗಯ್ಯ ಗಾಯಗೊಂಡಿದ್ದರು.  ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಶಿರಸಿ ಸಮೀಪದ ಅವರ ಸ್ವಗ್ರಾಮದಲ್ಲಿ ಇಂದು ರಾತ್ರಿ ರಾಜನಹಳ್ಳಿ ಶ್ರೀಗಳ ಮತ್ತು ಮಡಿವಾಳ ಶ್ರೀಗಳ ಸಾನಿಧ್ಯದಲ್ಲಿ ನೆರವೇರಿತು.

error: Content is protected !!