ನಗರದಲ್ಲಿ ಇಂದು ಅನಂತ ಚೇತನ ಪರಿವಾರ ಉದ್ಘಾಟನೆ

ಜೀವನೋತ್ಸಾಹ ಚಿರವಾಗಿರಲಿ ಎಂಬ ಸದುದ್ದೇಶದಿಂದ ಆರೋಗ್ಯ, ಪ್ರಕೃತಿ, ಸಂಸ್ಕೃತಿ, ಕೌಶಲ್ಯ, ಮನೋಲ್ಲಾಸ ಹೀಗೆ ವಿವಿಧ ಸಾಮಾಜಿಕ ಕಾಳಜಿಯ `ಅನಂತ ಚೇತನ ಪರಿವಾರ’ ಸಂಸ್ಥೆಯು ಇಂದು ಸಂಜೆ 4 ಗಂಟೆಗೆ ಶ್ರೀ ಸದ್ಯೋಜ್ಯಾತ ಶಿವಾಚಾರ್ಯ ನಿಕೇತನ ಹಿರೇಮಠ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮುಖ್ಯ ಸಂಚಾಲಕರಾದ ಶ್ರೀಮತಿ ಸುಮ ಸದಾನಂದ ತಿಳಿಸಿದ್ದಾರೆ. 

ಸಂಸ್ಥೆಯ ಉದ್ಘಾಟನೆಯನ್ನು ಹರಿಹರ ಎಂ.ಕೆ.ಇ.ಟಿ. ಡೀನ್‌ ಡಾ. ಬಿ.ಟಿ.ಅಚ್ಯುತ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಾಕುಂಚ ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಆಗಮಿಸಲಿದ್ದಾರೆ. ಅನಂತ ಚೇತನ ಪರಿವಾರದ ಸಂಸ್ಥಾಪಕರಾದ ಡಾ. ಆರತಿ ಸುಂದರೇಶ್‌ ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಸಮಿತಿ ಸದಸ್ಯರಾದ ಶ್ರೀಮತಿ ಹೇಮಾ ರುದ್ರಮುನಿ ತಿಳಿಸಿದ್ದಾರೆ.

error: Content is protected !!