ಮಾಜಿ ಮೇಯರ್‌ ತೇಜೋವಧೆ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಆಡಿಯೋ ವೈರಲ್

ದಾವಣಗೆರೆ, ಜು. 12- ಮಹಾನಗರ ಪಾಲಿಕೆಯ 17 ನೇ ವಾರ್ಡ್ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ಮತ್ತು ಅವರ ಹಿಂಬಾಲಕರುಗಳಿಂದ ಮಾಜಿ ಮಹಾಪೌರರೂ, ಹಾಲಿ ಸದಸ್ಯ ಬಿ.ಜಿ. ಅಜಯ್ ಕುಮಾರ್ ಅವರ ಮೇಲೆ ಅಪ ಪ್ರಚಾರ ಮಾಡಲು ಹೋಗಿ ತಮ್ಮ ಬಾವಿಯನ್ನು ತಾವೇ ತೋಡಿಕೊಂಡಿ ರುವುದು ಇದೀಗ ಬಯಲಾಗಿದೆ.

ಸೇಂಟ್ ಪಾಲ್ಸ್ ಕಾನ್ವೆಂಟ್ ಎದುರು ಡ್ರೈನೇಜ್ ಪೈಪ್ ತುಂಬಿ ಹರಿಯುತ್ತಿ ದ್ದುದನ್ನು ಕಂಡು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಕಾರ್ಮಿಕರನ್ನು ಕರೆಸಿ ಸರಿಪಡಿಸುತ್ತಿದ್ದ ವೇಳೆ ಫೋಟೋ ತೆಗೆದು ಬಿ.ಜಿ. ಅಜಯ್ ಕುಮಾರ್ ಅವರನ್ನು ತೇಜೋವಧೆ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಿನೇಶ್ ಕೆ.ಶೆಟ್ಟಿ ಅವರು ಈ ಹಿಂದೆ ಮಾಡಿದ ಕಳಪೆ ಕಾಮಗಾರಿಯನ್ನು ಅಜಯಕುಮಾರ್ ಅವರು ಸರಿಪಡಿಸಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ದಿನ ನಿತ್ಯ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ಸುದ್ದಿಯ ಶೋಕಿ ಹೊಂದಿರುವ ದಿನೇಶ್ ಶೆಟ್ಟಿ ಮತ್ತು ಹಿಂಬಾಲಕರು ತಾವೇ ತೋಡಿದ ಬಾವಿಗೆ ತಾವೇ ಬಿದ್ದಿದ್ದಾರೆ.

error: Content is protected !!