ದಾವಣಗೆರೆ, ಜು.13- ಸಮೀಪದ ಆವರಗೆರೆಯ ಎಸ್ಎಸ್ಎಂ ನಗರದಲ್ಲಿನ ಸ್ವತ್ತುಗಳಿಗೆ ಖಾತೆ ಕೂರಿಸುವ ಜತೆಗೆ ಮೂಲ ಸೌಲಭ್ಯ ಒದಗಿಸುವಂತೆ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಮನವಿ ಸಲ್ಲಿಸಿದರು. ಸ್ವತ್ತು, ಯುಜಿಡಿ, ಚರಂಡಿ, ಮನೆ ಕಟ್ಟಲು ಸಹಾಯ ಧನ ಮಂಜೂರು ಮಾಡುವುದು ಮತ್ತು ಮನೆಗಳ ಮೇಲೆ ಹಾದಿರುವ ಹೈಟೆನ್ಷನ್ ಲೈನ್ ತೆರವುಗೊಳಿಸಲು ಒತ್ತಾಯಿಸಿದಾಗ ಆಯುಕ್ತರು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಬೇಡಿಕೆ ಈಡೇರಿಕೆಗೆ ಭರವಸೆ ನೀಡಿದ್ದಾರೆ.
August 14, 2024