ಪ್ರಭುದೇವ್, ವಿದ್ಯಾನಗರ ಲಯನ್ಸ್ ಅಧ್ಯಕ್ಷ

ಪ್ರಭುದೇವ್, ವಿದ್ಯಾನಗರ ಲಯನ್ಸ್ ಅಧ್ಯಕ್ಷ

ನಗರದಲ್ಲಿ ಇಂದು ನೂತನ ಪದಾಧಿಕಾರಿಗಳ ಸೇವಾ ದೀಕ್ಷಾ ಕಾರ್ಯಕ್ರಮ

ದಾವಣಗೆರೆ,ಜು.12- ಸ್ಥಳೀಯ ವಿದ್ಯಾನಗರ ಲಯನ್ಸ್ ಕ್ಲಬ್ಬಿನ 2024-25ನೇ ಸಾಲಿನ ಅಧ್ಯಕ್ಷರಾಗಿ ತಾಲ್ಲೂಕು ಪಂಚಾಯ್ತಿಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಕಾರಿ ಎಲ್.ಎಸ್. ಪ್ರಭುದೇವ್ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಯು.ಆರ್. ಅರವಿಂದ್, ಖಜಾಂಚಿಯಾಗಿ ಎಂ.ಎ. ಸುದರ್ಶನ್ ಕುಮಾರ್ ಆಯ್ಕೆಯಾಗಿದ್ದಾರೆ.

ಎಲ್.ಎಸ್. ಪ್ರಭುದೇವ್ ನೇತೃತ್ವದ ನೂತನ ಪದಾಧಿಕಾರಿಗಳ ಸೇವಾದೀಕ್ಷಾ ಕಾರ್ಯಕ್ರಮವು ನಾಳೆ ದಿನಾಂಕ 13ರ ಶನಿವಾರ ಸಂಜೆ 6.30ಕ್ಕೆ  ವಿದ್ಯಾನಗರ ಲಯನ್ಸ್ ಸೇವಾ ಭವನದಲ್ಲಿ ನಡೆಯಲಿದೆ.

ವಿದ್ಯಾನಗರ ಲಯನ್ಸ್ ಕ್ಲಬ್ ಹಾಲಿ ಅಧ್ಯಕ್ಷ ಸಿ.ಹೆಚ್. ದೇವರಾಜ್ ಅವರ ಅಧ್ಯಕ್ಷತೆಯಲ್ಲಿ ಏರ್ಪಾಡಾಗಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಲಯನ್ಸ್ ಛೇರ್ಮನ್ ಕೆ. ರಮಾನಂದ್ ಅವರು ನೂತನ ಪದಾಧಿಕಾರಿಗಳನ್ನು ಪ್ರತಿಷ್ಠಾಪಿಸುವರು.

ಜಿಲ್ಲಾ ಲಯನ್ಸ್ ನಿಕಟಪೂರ್ವ ರಾಜ್ಯಪಾಲರುಗಳಾದ ಡಾ. ಜಿ. ಶಿವಲಿಂಗಪ್ಪ, ಡಾ. ಬಿ.ಎಸ್. ನಾಗಪ್ರಕಾಶ್, ಡಾ.ಟಿ. ಬಸವರಾಜ್, ಹೆಚ್.ಎನ್. ಶಿವಕುಮಾರ್, ಜಿಲ್ಲಾ ಲಯನ್ಸ್ ಛೇರ್ಮನ್ ಓ.ಜಿ .ರುದ್ರೇಗೌಡ, ಜಿಲ್ಲಾ ಲಯನ್ಸ್ ಛೇರ್ಮನ್ ಬೆಳ್ಳೂಡಿ ಶಿವಕುಮಾರ್, ಪ್ರಾಂತೀಯ ಅಧ್ಯಕ್ಷ ವೈ.ಬಿ. ಸತೀಶ್, ವಲಯ ಕಾರ್ಯದರ್ಶಿ ನಾಗರಾಜ ಚಟ್ಟಕಿ, ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳುವಯ್ಯ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

error: Content is protected !!