ನಿಟುವಳ್ಳಿಯಲ್ಲಿ ಇಂದು ಶಿವರಾಜ್ ಕುಮಾರ್ ಹುಟ್ಟು ಹಬ್ಬ

ದಾವಣಗೆರೆ, ಜು. 11- ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟ, ಡಾ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ರಾಜರತ್ನ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಅಖಿಲ ಕರ್ನಾಟಕ ಯುವರಾಜ್‌ಕಮಾರ್ ಅಭಿಮಾನಿಗಳ ಸಂಘ  ಇವರುಗಳ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 12 ರ ಶುಕ್ರವಾರ ಸಂಜೆ 6.30 ಕ್ಕೆ ನಿಟುವಳ್ಳಿ ಮಣಿಕಂಠ ವೃತ್ತದಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಜನ್ಮ ದಿನ ಆಚರಿಸಲಾಗುವುದು ಎಂದು ಸಂಘಟನೆಗಳ ಜಿಲ್ಲಾಧ್ಯಕ್ಷ ಬಿ. ಯೋಗೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಂಸದರಾದ ಡಾ.  ಪ್ರಭಾ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ಆರ್.ಎಸ್. ಶೇಖರಪ್ಪ, ದಿನೇಶ್ ಕೆ. ಶೆಟ್ಟಿ, ಶಾಸಕ ಬಸವರಾಜ್ ಶಿವಗಂಗಾ, ಪಾಲಿಕೆ ಸದಸ್ಯೆ ರೇಣುಕಾ ಶ್ರೀನಿವಾಸ್,  ಮುಖಂಡರುಗಳಾದ ಓ. ಮಹೇಶ್ವರಪ್ಪ, ಗಣೇಶ ಹುಲ್ಮನಿ, ಕುಮಾರಣ್ಣ, ಸಂತೋಷ್ ಕುಮಾರ್, ಹೆಚ್.ಬಿ. ದುರುಗೇಶ್, ಅರುಣ, ಬಸವರಾಜ್ ತೋಟದ್, ನಿಟುವಳ್ಳಿ ದೇವಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.

ವೇದಿಕೆ ಕಾರ್ಯಕ್ರಮದ ನಂತರ ದಿಯಾ ಮೆಲೋಡಿಯಸ್ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜಣ್ಣ, ವೈ. ಭಾಗ್ಯದೇವಿ, ಕೆ.ವೈ. ತಿಪ್ಪೇಸ್ವಾಮಿ, ನಾಗರಾಜ್, ಸುರೇಶ್, ಹರೀಶ್ ಮತ್ತಿತರರಿದ್ದರು.

error: Content is protected !!