ನಗರಕ್ಕೆ ನಾಳೆ ಸಂಕಲ್ಪ ಯಾತ್ರೆ

ದಾವಣಗೆರೆ, ಜು. 10 – ವಿಹಂಗಮ ಯೋಗ ಸಂತ ಸಮಾಜದ ಸ್ಥಾಪನೆ. ಶತಾಬ್ದ ಸಮಾರೋಪ ಮಹೋತ್ಸವ 25,000 ಕುಂಡಗಳನ್ನು ಇರಿಸಿ ಸ್ವರ್ವೇದ ಜ್ಞಾನ ಮಹಾಯಜ್ಞ ನಿಮಿತ್ತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಆಯೋಜಿಸಲಾಗಿರುವ ರಾಷ್ಟ್ರವ್ಯಾಪಿ ಸಂಕಲ್ಪ ಯಾತ್ರೆಯು ಅನೇಕ ರಾಜ್ಯಗಳಿಂದ ಪ್ರವಾಸಗೊಂಡು ನಾಡಿದ್ದು ದಿನಾಂಕ 12 ರ ಶುಕ್ರವಾರ ನಗರವನ್ನು ತಲುಪಲಿದೆ.

ದಿವ್ಯ ಸ್ವರ್ವೇದ ಕಥೆಯ ಪ್ರವಕರ್ತಕ ಸಂತಶ್ರೀ ವಿಜ್ಞಾನ ದೇವಜೀ ಮಹಾರಾಜ ಪಾವನ ಉಪಸ್ಥಿತಿಯಲ್ಲಿ ಸ್ವರ್ವೇದ ಕಥಾಮೃತ ಸಮಾರೋಪ ಹಾಗೂ ಸಾಧನ ಸಮಾವೇಶವು ದಾವಣಗೆರೆ – ಹರಿಹರ ಅರ್ಬನ್ ಸಮುದಾಯ ಭವನದಲ್ಲಿ ಅಂದು ಸಂಜೆ 5 ಗಂಟೆಗೆ ನೆರವೇರಲಿದೆ.

error: Content is protected !!