ನಗರದಲ್ಲಿ ಇಂದು ಲೋಕ್ ಅದಾಲತ್

ಬಾಪೂಜಿ ಶೈಕ್ಷಣಿಕ ಸಂಘ, ಆರ್.ಎಲ್. ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಲೋಕ ಅದಾಲತ್ ಜಾಗೃತಿ ಜಾ ಥಾದ ಉದ್ಘಾಟನೆ ಇಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ರಾಲಿಗೆ ಚಾಲನೆ ನೀಡುವರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮಾ.ಕರೆಣ್ಣ ವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್, ಆರ್.ಎಲ್.ಕಾನೂನು ಕಾಲೇಜಿನ ಪ್ರಾಚಾ ರ್ಯ ಡಾ.ಜಿ.ಎಸ್.ಯತೀಶ್, ಪ್ರಿನ್ಸಿಪಾಲ್, ಐಕ್ಯೂಎಸಿ ಸಹ ಸಂಚಾಲಕ ಬಿ.ಪಿ.ಬಸವ ನಗೌಡ, ಕಾರ್ಯಕ್ರಮದ ಸಂಚಾಲಕ ಟಿ. ವಿದ್ಯಾಧರ ವೇದವರ್ಮ ಆಗಮಿಸಲಿದ್ದಾರೆ.

error: Content is protected !!