ರಸಗೊಬ್ಬರ ಮಿತ ಬಳಕೆಗೆ ಸೂಚನೆ

ದಾವಣಗೆರೆ, ಜು. 5-  ಜಿಲ್ಲೆಯಾದ್ಯಂತ  ಮಳೆಯಾಗುತ್ತಿದ್ದು, ರೈತರು ಯೂರಿಯಾ ರಸಗೊಬ್ಬರವನ್ನು ಬಳಕೆ ಮಾಡುವಾಗ ಸೂಕ್ತ ಎಚ್ಚರಿಕೆ ವಹಿಸುವಂತೆ ಕೃಷಿ  ಇಲಾಖೆ ತಿಳಿಸಿದೆ. ಪ್ರತಿ ಎಕರೆಗೆ ಖುಷ್ಕಿ ಮುಸುಕಿನ ಜೋಳಕ್ಕೆ 25 ಕೆ.ಜಿ. ಯೂರಿಯಾ ಮಾತ್ರ ಬಳಸಬೇಕು. ಹೆಚ್ಚಿನ ಪ್ರಮಾಣ ದಲ್ಲಿ ಬಳಸಿದರೆ ಮುಂದೆ ಬರುವ ದಿವಸಗಳಲ್ಲಿ ಮಳೆಯ ಕೊರತೆಯುಂ ಟಾದಲ್ಲಿ ಬೆಳೆಗೆ ತೀವ್ರ ತರವಾದ ಹಾನಿಯಾಗುವುದು.  ಬಾಕಿ ಉಳಿದ ಸಾರಜನಕದ ಅವಶ್ಯಕತೆಗಳಿಗೆ ನೀರಿನಲ್ಲಿ ಕರಗುವ ಪೋಷಕಾಂಶಗಳನ್ನು ಸಿಂಪಡಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. 

error: Content is protected !!