ಐರಣಿ ಹೊಳೆಮಠದಲ್ಲಿ ಇಂದಿನಿಂದ ಮುಪ್ಪಿನಾರ್ಯ ಶ್ರೀಗಳ ಪುಣ್ಯಾರಾಧನೆ

ಐರಣಿ ಹೊಳೆಮಠದಲ್ಲಿ ಇಂದಿನಿಂದ ಮುಪ್ಪಿನಾರ್ಯ ಶ್ರೀಗಳ ಪುಣ್ಯಾರಾಧನೆ

ರಾಣೇಬೆನ್ನೂರು, ಜು.5- ತಾಲ್ಲೂಕಿನ ಐರಣಿ ಹೊಳೆಮಠದ ಶ್ರೀ ಸದ್ಗುರು ಮುಪ್ಪಿನಾರ್ಯ ಮಹಾತ್ಮಾಜಿಯವರ 40ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವು ಇದೇ ದಿನಾಂಕ 8ರ ಸೋಮವಾರ ನಡೆಯಲಿದೆ. ಅಂದು ಬೆಳಿಗ್ಗೆ ಸಾಮೂಹಿಕ ವಿವಾಹ ಮತ್ತು ಮಧ್ಯಾಹ್ನ 3 ಗಂಟೆಗೆ ರಥೋತ್ಸವ ಜರುಗಲಿದೆ.

ನಾಳೆ ದಿನಾಂಕ 6ರ ಶನಿವಾರ ಬ್ರಾಹ್ಮಿ ಮುಹೂರ್ತದಲ್ಲಿ ಅಖಂಡ ಶಿವ ಭಜನೆ, ಮುಂಜಾನೆ 6 ಗಂಟೆಗೆ ಪಾದಪೂಜೆ, ದರ್ಶನ, ಬೆಳಿಗ್ಗೆ ಗುರು ಮಹೋತ್ಸವ, ಬೆಳಿಗ್ಗೆ 8ಕ್ಕೆ ಪ್ರವಚನ, ಬೆಳಿಗ್ಗೆ 11ರಿಂದ ಅನ್ನ ಸಂತರ್ಪಣೆ, ಮಧ್ಯಾಹ್ನ 3 ರಿಂದ ಉಪನ್ಯಾಸ, ಸಂಜೆ 5 ರಿಂದ ದೀಪೋತ್ಸವ, ಸಂಜೆ 6 ರಿಂದ ಕೀರ್ತನೆ ಏರ್ಪಾಡಾಗಿದೆ.

ದಿನಾಂಕ 9ರ ಮಂಗಳವಾರ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಈ ಎಲ್ಲಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಸದ್ಗುರು ಬಸವರಾಜ ದೇಶೀಕೇಂದ್ರ ಸ್ವಾಮೀಜಿ ವಹಿಸುವರು.

ಬರುವ ನವೆಂಬರ್ 28 ರಿಂದ 3 ದಿನಗಳ ಕಾಲ ಶ್ರೀ ಕ್ಷೇತ್ರ ಕೋಣನತಲೆಯಲ್ಲಿ ಶ್ರೀ ಸದ್ಗುರು ಬಸವರಾಜ ದೇಶೀಕೇಂದ್ರ ಮಹಾತ್ಮಾಜಿಯವರ ಪಟ್ಟಾಭಿಷೇಕದ 47ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಗಳು ಜರುಗಲಿವೆ.

error: Content is protected !!