ಮಲೇಬೆ ನ್ನೂರು, ಜು.3- ಉಕ್ಕಡಗಾತ್ರಿ ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ (ಸ್ಮಶಾನ) ಮುಳ್ಳು ಗಿಡಗಳು ಬೆಳೆದು ಶವ ಸಂಸ್ಕಾರಕ್ಕೆ ಅಡ್ಡಿ ಉಂಟಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ವರಿಗೆ ತಿಳಿಸಿದ್ದರೂ ಸಹ ಗಮನ ಹರಿಸದಿದ್ದಾಗ ಗ್ರಾಮದ ಯುವಕರು ಮತ್ತು ಗ್ರಾಮಸ್ಥರರು ಸೇರಿ ಜೆಸಿಬಿ ಮೂಲಕ ಸ್ಮಶಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಎಸ್.ಸುರೇಶ್, ಮಂಜು ದೊಡ್ಡಮನಿ, ಸಿದ್ದೇಶ್ ಪೂಜಾರ, ವಸಂತ, ನಾಗರಾಜ್ ಧೂಣಿ ಹಾಗೂ ಯುವಕರು ಈ ಕಾರ್ಯದಲ್ಲಿದ್ದರು.
ಉಕ್ಕಡಗಾತ್ರಿಯಲ್ಲಿ ಜೆಸಿಬಿಯಿಂದ ರುದ್ರಭೂಮಿಯ ಸ್ವಚ್ಛತಾ ಕಾರ್ಯ
![05 UKKADAGATHRI 04.07.2024 ಉಕ್ಕಡಗಾತ್ರಿಯಲ್ಲಿ ಜೆಸಿಬಿಯಿಂದ ರುದ್ರಭೂಮಿಯ ಸ್ವಚ್ಛತಾ ಕಾರ್ಯ](https://janathavani.com/wp-content/uploads/2024/07/05-UKKADAGATHRI-04.07.2024-.jpg)