ದಾವಣಗೆರೆ, ಜು.3- ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ಪ್ರಯುಕ್ತ ಚಾರ್ಟರ್ಡ್ ಅಕೌಂಟೆಂಟ್ಸ್ ಭವದಲ್ಲಿ ರಕ್ತದಾನ ಶಿಬಿರ ನಡೆಯಿತು.
ಈ ಶಿಬಿರದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಸಿಎ ಉಮೇಶ್ ಶೆಟ್ಟಿ, ಡಿ.ಎನ್. ಶಿವಾನಂದ, ಪೊನ್ನಲಾಲ್, ಕೊಟ್ರೇಶ್, ವೈದ್ಯಾಧಿಕಾರಿ ಡಾ.ಪಿ.ಕೆ. ಬಸವರಾಜ್, ರಕ್ತ ನಿಧಿ ಕೇಂದ್ರದ ಸಂಯೋಜಕ ಎನ್.ಜಿ. ಶಿವಕುಮಾರ, ಅಸೋಸಿಯೇಷನ್ ಅಧ್ಯಕ್ಷ ಸಿಎ. ಕಿರಣ್, ಎಲ್. ಪಾಟೀಲ್, ಗೌರವಾಧ್ಯಕ್ಷ ಅಥಣಿ. ಎಸ್. ವೀರಣ್ಣ, ಕಾರ್ಯದರ್ಶಿ ಉಮೇಶ್ ಶೆಟ್ಟಿ, ಖಜಾಂಜಿ ಲಿಂಗರಾಜ್, ಮಾಜಿ ಅಧ್ಯಕ್ಷ ಬಸವರಾಜ್ ಒಡೆಯರ್, ಕಿರಣ್ ಕುಮಾರ್, ಗಿರೀಶ್ ನಾಡಿಗ್, ವಿಜಯ್ ಕುಮಾರ್, ಮಹೇಶ್ ಶೆಂಡಿಗೆ, ಪ್ರಯೋಗ ಶಾಲಾ ಮೇಲ್ವಿಚಾರಕ ಆರ್. ವಿನಾಯಕ, ತಂತ್ರಜ್ಞ ಕೆ. ಗಿರೀಶ್, ಸಂಘದ ಸದಸ್ಯರು, ಸಿಎ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇದ್ದರು.