ಹೊಳೆಸಿರಿಗೆರೆಯಲ್ಲಿ ಇಂದು ಸ್ಮೃತಿ ದಿನ

ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಇಂದು ಬೆಳಿಗ್ಗೆ 10.30ಕ್ಕೆ ರಾಜಯೋಗಿನಿ ಬ್ರಹ್ಮಾಕುಮಾರಿ ಜಗದಂಬಾ ಸರಸ್ವತಿ ಮಮ್ಮನವರ ಸ್ಮೃತಿ ದಿನ ಹಾಗೂ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜೀ ಅವರ ಸ್ಮೃತಿ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಾಂತ ತಿಳಿಸಿದ್ದಾರೆ.

ದಿವ್ಯ ಸಾನ್ನಿಧ್ಯ : ಬ್ರಹ್ಮಾಕುಮಾರಿ ಲೀಲಾಜಿ. ಅಧ್ಯಕ್ಷತೆ : ಎನ್.ಜಿ.ನಾಗನಗೌಡ್ರು, ಗೌರವ ಸನ್ಮಾನ : ಬಿ.ಪಿ.ಹರೀಶ್, ನಂದಿಗಾವಿ ಶ್ರೀನಿವಾಸ್, ಬಿ.ಮಂಜಣ್ಣ, ಎಂ.ಶಿವಕುಮಾರ್, ಮಾಳಗಿ ಮಲ್ಲೇಶಪ್ಪ, ನಿವೃತ್ತ ಯೋಧರಾದ ಸುಭೇದಾರ್ ಹೆಚ್.ಶಿವಕುಮಾರ್, ಗೋಪಾಲಶೆಟ್ಟಿ, ಎನ್.ಪರಶುರಾಮಪ್ಪ, ಎರೇಸೀಮೆ ಈರೇಶ್.

error: Content is protected !!