ಹರಪನಹಳ್ಳಿ : ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಹರಪನಹಳ್ಳಿ : ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಹರಪನಹಳ್ಳಿ, ಜೂ. 30- ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಮಗಾರಿಗಳಿಗೆ  ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಭೂಮಿ ಪೂಜೆ ನೆರವೇರಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ  ಪ್ರಾಂಗಣದಲ್ಲಿ 300 ಮೆಟ್ರಿಕ್ ಟನ್ ಸಾಮರ್ಥ್ಯದ  ಗೋಡಾನ್ ಹಾಗೂ ಹರಾಜು ಕಟ್ಟೆ ನಿರ್ಮಾಣ.  ಪುರಸಭೆ ವತಿಯಿಂದ  ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ. ತಾಲ್ಲೂಕಿನ ತಿಪ್ಪನಾಯಕನಹಳ್ಳಿ ಗ್ರಾಮದ ದುರ್ಗಮ್ಮನ ದೇವಸ್ಥಾನದಿಂದ  ಸ್ಮಶಾನದ ರಸ್ತೆವರೆಗೆ ಬಾಕ್ಸ್ ಚರಂಡಿ ನಿರ್ಮಾಣ. 

ತಾಲ್ಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ 2022-23ನೇ ಸಾಲಿನ  ಮಹಾತ್ಮಾ ಗಾಂಧಿ ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ  ನಿರ್ಮಿಸಲಾದ ಭಾರತ್  ನಿರ್ಮಾಣ ಸೇವಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯನ್ನು ಅವರು ನೆರವೇರಿಸಿದರು.  

ಬಾಪೂಜಿ ನಗರದಲ್ಲಿ  ಸಿಸಿ ರಸ್ತೆ ನಿರ್ಮಾಣ. ಉದ್ಗಟ್ಟಿ ಗ್ರಾಮದಲ್ಲಿ  ಸಿಸಿ ರಸ್ತೆ  ಮಾಡ್ಲಗೇರಿ ತಾಂಡಾದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ. ಬಾಗಳಿ ಗ್ರಾಮದಲ್ಲಿ ಸಂತೆ ಮೈದಾನ.  ನಂದಿಬೇವೂರು  ತಾಂಡಾ  ಕಾಮಗಾರಿಗಳಿಗೆ    ಭೂಮಿ ಪೂಜೆ ನೆರವೇರಿಸಿದರು.

ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ,  ತಹಶೀಲ್ದಾರ್ ಗಿರೀಶ್‌ಬಾಬು, ಪಿಎಸ್‌ಐ ಶಂಭುಲಿಂಗಯ್ಯ ಹಿರೇಮಠ್, ಪುರಸಭೆ ಸದಸ್ಯ   ಲಾಟಿ ದಾದಾಪೀರ್, ಮುಖಂಡರಾದ ಇಸ್ಮಾಯಿಲ್ ಎಲಿಗಾರ್. ಮೈದೂರು ರಾಮಣ್ಣ, ಸನಾವುಲ್ಲಾ, ಎಲ್.ಮಂಜಾನಾಯ್ಕ. ಉಮಾ ಶಂಕರ್, ಕವಿತ ಸುರೇಶ  ಇತರರು ಇದ್ದರು.

error: Content is protected !!