ನಗರದಲ್ಲಿ ಇಂದು ದತ್ತಿ ಕಾರ್ಯಕ್ರಮ, ಶರಣ ಚಿಂತನ ಗೋಷ್ಠಿ

ನಗರದಲ್ಲಿ ಇಂದು  ದತ್ತಿ ಕಾರ್ಯಕ್ರಮ, ಶರಣ ಚಿಂತನ ಗೋಷ್ಠಿ

 ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ  ಬಿ.ಇ.ಎ. ಹೈಯರ್ ಪ್ರೈಮರಿ ಶಾಲೆಯ ಸಭಾಂಗಣದಲ್ಲಿ ಲಿಂ. ಶ್ರೀಮತಿ ಇಂದುಮತಿ ಎಂ. ಪಾಟೀಲ ಅವರ ಹೆಸರಿನ ದತ್ತಿ ಕಾರ್ಯಕ್ರಮ ಹಾಗೂ ಶರಣ ಚಿಂತನ ಗೋಷ್ಠಿ ನಡೆಯಲಿದೆ.

ಬಾಪೂಜಿ ಆಡಳಿತ ಮಂಡಳಿ ಸದಸ್ಯರಾದ ಕಿರುವಾಡಿ ಗಿರಿಜಮ್ಮ ಕಾರ್ಯಕ್ರಮವನ್ನು ಉದ್ಘಾಟಿ ಸುವರು. ಬಿ.ಇ.ಎ. ಹೈಯರ್ ಪ್ರೈಮರಿ ಶಾಲೆ ಪ್ರಾಚಾರ್ಯ ಹೆಚ್.ಎಸ್. ಸತೀಶ್ ಬಹುಮಾನ ವಿತರಿಸುವರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. `ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’ ವಿಷಯ ಕುರಿತು ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಮಾತನಾಡಲಿದ್ದಾರೆ.

ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಗಾಯತ್ರಿ ವಸ್ತ್ರದ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಎನ್.ಎಸ್. ರಾಜು ಭಾಗವಹಿಸಲಿದ್ದಾರೆ. 

error: Content is protected !!