ಯೋಗಾಸನದಿಂದ ಮನಸ್ಸು ಶುದ್ಧಿ : ರಾಜಶೇಖರಯ್ಯ

ಯೋಗಾಸನದಿಂದ ಮನಸ್ಸು ಶುದ್ಧಿ : ರಾಜಶೇಖರಯ್ಯ

ಹರಪನಹಳ್ಳಿ, ಜೂ. 23 – ಯೋಗದ ಮಹತ್ವ ಇಡೀ ಜಗತ್ತಿಗೆ ಅರ್ಥವಾಗಿದೆ ಎಂದು ಎನ್‍ಎಸ್‍ಎಸ್ ಸಂಚಾಲಕ ರಾಜಶೇಖರಯ್ಯ ಹೇಳಿದರು. 

ಪಟ್ಟಣದ ಎಡಿಬಿ ಕಾಲೇಜಿನ ಆವರಣದಲ್ಲಿ ವಿವಿಧ ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 10ನೇ ವರ್ಷದ ವಿಶ್ವ ಯೋಗ ದಿನಚಾರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಗತ್ತಿನಲ್ಲಿ ಯೋಗ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಯೋಗಾಭ್ಯಾಸದಿಂದ ಮನುಷ್ಯನ ಉತ್ತಮ ಆರೋಗ್ಯ ಮತ್ತು ಮನಸ್ಸು ಶುದ್ಧಿಯಾಗುತ್ತದೆ ಎಂದರು.

ಪ್ರಾಚಾರ್ಯರ ಎಸ್.ಎಂ. ಸಿದ್ದಲಿಂಗಮೂರ್ತಿ, ದೈಹಿಕ ಉಪನ್ಯಾಸಕ ನಿಯಾಜ್, ಡಾ. ಗೋವರ್ಧನ್, ಪಂಪನಾಯ್ಕ, ನಿರೂಪೇಂದ್ರ, ಬಸವಲಿಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!