ವೀರೇಶ್ವರ ಪುಣ್ಯಾಶ್ರಮದಲ್ಲಿ ನಾಳೆ ಶಿವಾನುಭವ ಗೋಷ್ಠಿ

ವೀರೇಶ್ವರ ಪುಣ್ಯಾಶ್ರಮದಲ್ಲಿ  ನಾಳೆ ಶಿವಾನುಭವ ಗೋಷ್ಠಿ

ದಾವಣಗೆರೆ, ಜೂ. 19- ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾ ಶ್ರಮದಲ್ಲಿ ನಾಡಿದ್ದು ಶುಕ್ರವಾರ ಬೆಳಿಗ್ಗೆ 11.30ಕ್ಕೆ  ಕಾರ ಹುಣ್ಣಿಮೆ, ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಸಾನ್ನಿಧ್ಯವನ್ನು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ (ಆವರಗೊಳ್ಳ), ಶ್ರೀ ಕಲ್ಲಯ್ಯಜ್ಜನವರು (ಶ್ರೀ ವೀರೇಶ್ವರ ಪುಣ್ಯಾಶ್ರಮ) ವಹಿಸುವರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಅಥಣಿ ಎಸ್. ವೀರಣ್ಣ ವಹಿಸುವರು. ಮುಖ್ಯ ಅತಿಥಿಗಳಾಗಿ ದೇವರಮನಿ ಶಿವಕುಮಾರ್, ಡಾ. ಜೆ.ಎನ್. ಕರಿಬಸಪ್ಪ, ಜಿ.ಹೆಚ್. ಯಲ್ಲಪ್ಪ, ಎಸ್.ಕೆ ವೀರಣ್ಣ, ಶ್ರೀಮತಿ ಎಂ.ಜಿ. ಶಶಿಕಲಾ ಮೂರ್ತಿ ಆಗಮಿಸುವರು. 

error: Content is protected !!