ಕೋಡಿ ಕ್ಯಾಂಪ್‌ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ನಾಡಿದ್ದು ಬಾದಾಮಿ ಅಮಾವಾಸ್ಯೆ

ಕೋಡಿ ಕ್ಯಾಂಪ್‌ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ನಾಡಿದ್ದು ಬಾದಾಮಿ ಅಮಾವಾಸ್ಯೆ

 ದಾವಣಗೆರೆ, ಜೂ. 3 – ನಗರದ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ ಇವರಿಂದ, ಮಾಗಾನಹಳ್ಳಿ ಕೋಡಿ ಕ್ಯಾಂಪ್‌ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಇದೇ ದಿನಾಂಕ 6ರ ಗುರುವಾರ ಬೆಳಿಗ್ಗೆ 6.30ಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ. ನಂತರ ಬೆಳಿಗ್ಗೆ 8 ರಿಂದ ಪ್ರಸಾದ ದಾಸೋಹ ಏರ್ಪಡಿಸಲಾಗಿದೆ. ದೇವರಮನೆ ಶಿವಕುಮಾರ್‌ ಮತ್ತು ಕುಟುಂಬದವರು ಪ್ರಸಾದದ ಸೇವಾಕರ್ತ ರಾಗಿದ್ದಾರೆ. ವಿವರಕ್ಕೆ ಕಣಕುಪ್ಪಿ ಮುರುಗೇಶಪ್ಪ (96118 89151), ಟಿ.ಜಿ. ಬಕ್ಕೇಶಪ್ಪ (91089 88898) ಬಿ.ಚಿದಾನಂದಪ್ಪ (98455 28449), ಮಲ್ಲಾಬಾದಿ ಗುರುಬಸವರಾಜ್‌ (79757 97079) ತಿಳಿಸಿದ್ದಾರೆ. ದಾಸೋಹ ಮನೆ ಮತ್ತು ಸಭಾಂಗಣ ಕಟ್ಟಡವು ಪ್ರಗತಿ ಹಂತದಲ್ಲಿದೆ. ಭಕ್ತಾದಿಗಳು ದೇಣಿಗೆ ಸಲ್ಲಿಸಬಹುದು.

error: Content is protected !!