ಪತ್ರಿಕಾ ವಿತರಕರ ನಡಿಗೆ ಕೋಟೆ ನಗರಿ ಚಿತ್ರದುರ್ಗದ ಕಡೆಗೆ : ಕೆ. ಶಂಭುಲಿಂಗ

ಪತ್ರಿಕಾ ವಿತರಕರ ನಡಿಗೆ ಕೋಟೆ ನಗರಿ ಚಿತ್ರದುರ್ಗದ ಕಡೆಗೆ : ಕೆ. ಶಂಭುಲಿಂಗ

ಸೆಪ್ಟೆಂಬರ್ 8 ರಂದು ಚಿತ್ರದುರ್ಗದಲ್ಲಿ  ವಿತರಕರ ರಾಜ್ಯ ಸಮ್ಮೇಳನ ನಡೆಸಲು ನಿರ್ಧಾರ

ಚಿತ್ರದುರ್ಗ, ಜೂ. 2- ಈಗಾಗಲೇ ಮೂರು ರಾಜ್ಯಮಟ್ಟದ ಪತ್ರಿಕಾ ವಿತರಕರ ಸಮ್ಮೇಳನ ಯಶಸ್ವಿಯಾಗಿ ಜರುಗಿದ್ದು , ನಾಲ್ಕನೇ ವಿತರಕರ ರಾಜ್ಯ ಸಮ್ಮೇಳನವನ್ನು ಕೋಟೆ ನಗರಿ ಚಿತ್ರದುರ್ಗದಲ್ಲಿ ನಡೆಸಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಭುಲಿಂಗ ಕೆ. ಹೇಳಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲೆಯ ಕಾರ್ಯನಿರತ ಪತ್ರಿಕಾ ವಿತರಕರ ಸಂಘದ ಸಹಯೋಗದಲ್ಲಿ  ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ನೆರೆದಿದ್ದ ವಿವಿಧ ಜಿಲ್ಲೆಯ ಪತ್ರಿಕಾ ವಿತರಕರ ಸಂಘಟನೆಗಳ ಮುಖಂಡರುಗಳ ಸಮ್ಮುಖದಲ್ಲಿ ನಿರ್ಣಯವಾದ ಒಮ್ಮತದ ತೀರ್ಮಾನದಂತೆ ಸೆಪ್ಟೆಂಬರ್ 8 ರಂದು ಚಿತ್ರದುರ್ಗದಲ್ಲಿ  ಪತ್ರಿಕಾ ವಿತರಕರ ರಾಜ್ಯ ಸಮ್ಮೇಳನ ನಡೆಸುವಂತೆ ನಿರ್ಧರಿಸಲಾಯಿತು.

ಈ ಪೂರ್ವಭಾವಿ ಸಭೆಯಲ್ಲಿ ‌ಚಿತ್ರದುರ್ಗ, ದಾವಣಗೆರೆ, ಹಾವೇರಿ, ಯಲ್ಲಾಪುರ ತಾಲ್ಲೂಕು.ಧಾರವಾಡ, ಹುಬ್ಬಳ್ಳಿ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಳಗಾವಿ, ಶಿಗ್ಗಾವ್, ಚನ್ನರಾಯಪಟ್ಟಣ, ವಿಜಯಪುರ, ಹರಿಹರ, ತುಮಕೂರು, ಬೆಂಗಳೂರಿನ ಗಾಂಧಿನಗರ, ವಿಜಯನಗರದ, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

error: Content is protected !!