ಹರಪನಹಳ್ಳಿ, ಜೂ. 2- ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕನ್ನಡ ವಿಷಯದಲ್ಲಿ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಹಾಗೂ 120 ರಿಂದ 124 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ `ಕನ್ನಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷರಾದ ಸಪ್ನ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ವಿಜಯನಗರ ಜಿಲ್ಲೆಯವರಿಗೆ ಮಾತ್ರ ಅವಕಾಶವಿದ್ದು, ಜೂನ್ 5 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹಗರಿಬೊಮ್ಮ ನಹಳ್ಳಿ ಅಬ್ದುಲ್ ಲಿಯಾಖತ್ ಅಲಿ (9945364976), ಹೂವಿನಹಡಗಲಿ ಮಂಜುನಾಥ ಪಾಟೀಲ (7349190164), ಕೊಟ್ಟೂರು ಗಿರೀಶ್ ಬಿ.ಎಂ (9449654321), ಹೊಸಪೇಟೆ ಗುರುಬಸವರಾಜ (7899897666), ಕೂಡ್ಲಿಗಿ ಶಿವಾನಂದ ಬಿ. ಬಿ (9591749094), ಸಪ್ನ ಮಲ್ಲಿಕಾರ್ಜುನ (7795966081) ಇವರಿಗೆ ಅರ್ಜಿಯನ್ನು ಸಲ್ಲಿಸಬಹುದು.