ಹರಿಹರದಲ್ಲಿ ಇಂದು – ನಾಳೆ ಶ್ರೀ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ

ಹರಿಹರದಲ್ಲಿ ಇಂದು – ನಾಳೆ ಶ್ರೀ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ

ನಾಮದೇವ ಸಿಂಪಿ ಸಮಾಜ ದೈವ ಮಂಡಳಿ ವತಿಯಿಂದ ಶ್ರೀ  ವಿಠ್ಠಲ ರುಕ್ಮಿಣಿ ದಿಂಡಿ  ಮಹೋತ್ಸವ ನಡೆಯ ಲಿದೆ. ಏಕಾದಶಿ ಪ್ರಯುಕ್ತ ಇಂದು ಸಂಜೆ 5 ಗಂಟೆಗೆ ಮಹಿಳಾ ಮಂಡಳಿ ಯವ ರಿಂದ ವಿಷ್ಣು ಸಹಸ್ರ ನಾಮಾವಳಿ ಸಾಮೂಹಿಕ ಪಠಣ, 6 ಗಂಟೆಗೆ  ಭದ್ರಾವತಿ ಬದ್ರಿನಾಥ ಉತ್ತರಕರ್ ಇವರಿಂದ ಪ್ರವಚನ, 7 ಗಂಟೆಗೆ ದಾವಣಗೆರೆ ಚಂದ್ರಕಾಂತ ವಾದೋನಿ ಯವರಿಂದ ಕೀರ್ತನೆ, ರಾತ್ರಿ10 ಗಂಟೆಗೆ ಭಜನಾ ಮಂಡಳಿಯವರಿಂದ ಪಗಡಿ ಮತ್ತು ಪಾವೂಲ ಅಖಂಡ ಜಾಗರಣೆ ನಡೆಯಲಿದೆ.

ನಾಳೆ ಮಂಗಳವಾರ ಬೆಳಗ್ಗೆ 5 ಗಂಟೆಗೆ ಪಂಚಪದಿ ಕಾಕಡಾರತಿ ಭಜನೆ, 7 ಗಂಟೆಗೆ ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಪಾರಾಯಣ, 8-30 ಗಂಟೆಗೆ ಶ್ರೀ ವಿಠ್ಠಲ ರುಕ್ಮಿಣಿ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಮೆರವಣಿಗೆ, 11-30 ಕ್ಕೆ ಸಂತ ಪೂಜಾ, 12 ಕ್ಕೆ ಕಲಾ ಕೀರ್ತನೆ, 1-30 ಕ್ಕೆ ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಶಂಕರ್ ಖಟಾವ್ಕರ್ ತಿಳಿಸಿದ್ದಾರೆ.

error: Content is protected !!