ಹೆಂಡತಿ ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ, ಮೇ 30- ಒಡವೆ ಬಿಡಿಸಿಕೊಡು, ಮದ್ಯಪಾನ ಮಾಡುವುದನ್ನು ಬಿಡು ಎಂದಿದ್ದ ಹೆಂಡತಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಹೊನ್ನಾಳಿ ತಾಲ್ಲೂಕು ಸೊರಟೂರು ಗ್ರಾಮದ ದುರುಗಪ್ಪ ಅವರು ತಮ್ಮ ಮಗಳು ಶಿಲ್ಪಾಳನ್ನು ಗಂಡನಾದ ಗಿರೀಶ್ ಕೊಲೆಮಾಡಿರುವುದಾಗಿ ದೂರು ನೀಡಿದ್ದರು. ಆರೋಪಿಯು ಪತ್ನಿಯನ್ನು ನೇಣು ಹಾಕಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದ್ದರಿಂದ ತನಿಖಾಧಿಕಾರಿ ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ್  ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್.ಎನ್. ವಿಚಾರಣೆ ನಡೆಸಿ ಆರೋಪಿ ಗರೀಶನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಆರೋಪಿ ಪರ ಸರ್ಕಾರಿ ವಕೀಲ ಜಯ್ಯಪ್ಪ ನ್ಯಾಯ ಮಂಡಿಸಿದ್ದರು.

error: Content is protected !!