ನಗರದಲ್ಲಿ ಇಂದು ಭಿತ್ತಿ ಚಿತ್ರ ಕಲಾ ಶಿಬಿರ

ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಿಂದ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಭಿತ್ತಿಚಿತ್ರ ಕಲಾ ಶಿಬಿರದಲ್ಲಿ ಇಂದು ಮುಂಜಾನೆ 6.30ಕ್ಕೆ ವಿವಿ ದೃಶ್ಯಕಲಾ ಮಹಾವಿದ್ಯಾಲ ಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಡಾ. ಸತೀಶ್ ಕುಮಾರ ಪಿ. ವಲ್ಲೇಪುರೆ ಧ್ವಜಾರೋಹಣ ನೆರವೇರಿಸುವರು.

ಸಂಜೆ 5.30ಕ್ಕೆ ವಿಶೇಷ ಉಪನ್ಯಾಸ ನಡೆಯಲಿದ್ದು, ಭಿತ್ತಿ ಚಿತ್ರ ಕಲೆ ವಿಷಯ ಕುರಿತು ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ ಉಪನ್ಯಾಸ ನೀಡುವರು. ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಯೋಗ ವಿಜ್ಞಾನ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಡಾ. ಶಿವವೀರಕುಮಾರ ಚಂಡ್ರಕಿಮಠ್ ಅವರು  ಮುಖ್ಯ ಅತಿಥಿಯಾಗಿದ್ದಾರೆ.

error: Content is protected !!