ಪರಿಷತ್ ಸದಸ್ಯರಾಗಿ ಎಸ್. ದ್ವಾರಕನಾಥ್ ನೇಮಕಕ್ಕೆ ಒತ್ತಾಯ

ಪರಿಷತ್ ಸದಸ್ಯರಾಗಿ ಎಸ್. ದ್ವಾರಕನಾಥ್ ನೇಮಕಕ್ಕೆ ಒತ್ತಾಯ

ದಾವಣಗೆರೆ, ಮೇ 26- ಡಾ ಸಿ.ಎಸ್.ದ್ವಾರಕನಾಥ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕು ಎಂದು ಕಾಂಗ್ರೆಸ್ ನ್ಯಾಯ ಸಮಿತಿ ಜಿಲ್ಲಾಧ್ಯಕ್ಷರೂ ಆದ ಹಾಗೂ ಹಿರಿಯ ನ್ಯಾಯವಾದಿ ಎಸ್.ಪರಮೇಶ್  ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ರೂವಾರಿಗಳಾಗಿ, ಸಮಾಜದ ಕಟ್ಟಕಡೆಯ ಸಮುದಾಯಗಳ ಒಡನಾಟ ಹಾಗೂ ನಿರಂತರವಾಗಿ ಅವರ ಜೀವನದುದ್ದಕ್ಕೂ ಹೋರಾಟ ಮಾಡುತ್ತಾ ಬಂದಿರುವ ದ್ವಾರಕಾನಾಥ್ ಅವರಿಗೆ ಪರಿಷತ್ತಿಗೆ ನೇಮಕ ಮಾಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಾಬು ಗೋಸಾಯಿ, ಎಲ್.ಶ್ಯಾಮ್, ಮಹಮ್ಮದ್ ಸಮೀವುಲ್ಲಾ, ಕವಿತಾ ಚಂದ್ರಶೇಖರ್ , ಮುಬಾರಕ್, ಸಾದಿಕ್, ಫೈಯಾಜ್ ಅಹಮದ್ ಉಪಸ್ಥಿತರಿದ್ದರು.

error: Content is protected !!