ನಗರದಲ್ಲಿ ಇಂದು ಕಾಯಕ ದಿನಾಚರಣೆ – ದತ್ತಿ ಕಾರ್ಯಕ್ರಮ

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಎಸ್. ಬಿ.ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರ ಇವರ ಸಹಯೋಗದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಕಾಯಕ ದಿನಾಚರಣೆ – ದತ್ತಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಬಿ.ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ  ಡಾ. ಕೆ. ಷಣ್ಮುಖಪ್ಪ ನೆರವೇರಿಸಲಿದ್ದು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸುವರು. ಭರ್ಮಪ್ಪ ಮೈಸೂರು `ವಚನಗಳಲ್ಲಿ ವೈಚಾರಿಕತೆ’ ಎಂಬ ವಿಷಯ ಕುರಿತು ಅನುಭಾವ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಕಾಯಕ ಜೀವಿಗಳಾದ ಸೈಯದ್ ಉಮರ್ ಮತ್ತು ಎಂ. ಮಂಜುನಾಥ್, ದತ್ತಿ ದಾನಿಗಳಾದ ಶ್ರೀಮತಿ ವನಜಾಕ್ಷಮ್ಮ ಮತ್ತು ಎಂ.ಟಿ ಜಯದೇವಪ್ಪ ಅವರುಗಳನ್ನು ಸನ್ಮಾನಿಸಲಾಗುವುದು.

error: Content is protected !!