ರಾಂಪುರದಲ್ಲಿ ಇಂದು ಶ್ರೀ ಪುಣ್ಯಾರಾಧನೆ

ಹೊನ್ನಾಳಿ ತಾಲ್ಲೂಕಿನ ರಾಂಪುರ ಗ್ರಾಮದ ಶ್ರೀ ಹಾಲಸ್ವಾಮಿ ಬೃಹನ್ಮಠ ದಲ್ಲಿ ಲಿಂ. ಶ್ರೀಗಳ ಪುಣ್ಯಾರಾಧನೆ ಇಂದು ನಡೆಯಲಿದೆ. ಹಿರೇಕಲ್ಮಠದ  ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ  ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ರುದ್ರಾಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ರಾಂಪುರ ಮಠದ ಶಿವಕುಮಾರ ಹಾಲ ಸ್ವಾಮೀಜಿ ತಿಳಿಸಿದ್ದಾರೆ.

error: Content is protected !!