ಕೊಮಾರನಹಳ್ಳಿ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ರಾಮತಾರಕ ಯಜ್ಞ

ಕೊಮಾರನಹಳ್ಳಿ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ರಾಮತಾರಕ ಯಜ್ಞ

ಮಲೇಬೆನ್ನೂರು, ಮೇ 19- ಕೊಮಾರನ ಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶ್ರೀ ರಂಗನಾಥ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ಭಾನುವಾರ ರಾಮತಾರಕ ಯಜ್ಞವನ್ನು ಹಮ್ಮಿಕೊಳ್ಳಲಾಗಿತ್ತು.

ಚಿಕ್ಕಮಗಳೂರಿನ ರಾಮಚಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ ಜರುಗಿದ ಯಜ್ಞದಲ್ಲಿ ಅನೇಕ ಪುರೋಹಿತರು ಭಾಗವಹಿಸಿದ್ದರು. ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮವೂ ಸಂಭ್ರಮದಿಂದ ನೆರವೇರಿತು.

ಆಶ್ರಮದಲ್ಲಿರುವ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಸಮಾಧಿ ಸ್ಥಳಕ್ಕೆ ಈ ವೇಳೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಳೆದೆರಡು ದಿನಗಳಿಂದ ರಾಮನಾಮ ಜಮ ಮಾಡಿದ ಭಕ್ತರು, ಭಾನುವಾರ ರಾಮತಾರಕ ಯಜ್ಞದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿದರು.

ಆಶ್ರಮದ ಅಧ್ಯಕ್ಷ ಗಣೇಶರಾವ್, ಖಜಾಂಚಿ ಕೆ.ಎನ್.ರಂಗನಾಥ, ಟ್ರಸ್ಟಿ ಗುರುರಾಜ ರಾವ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದು, ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

error: Content is protected !!