ಮಳೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಿಲ್ಲ

ಮಳೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಿಲ್ಲ

ಹರಿಹರ ಪೌರಾಯುಕ್ತ ಬಸವರಾಜ್

ಹರಿಹರ, ಮೇ.17- ನಗರದಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಯಾವುದೇ ರೀತಿಯ ಅವಘಡ ಮತ್ತು ಸಾರ್ವಜನಿಕರಿಗೆ ತೊಂದರೆಗಳು ಸಂಭವಿಸಿರುವುದಿಲ್ಲ ಎಂದು ಪೌರಾಯುಕ್ತ ಐಗೂರು ಬಸವರಾಜ್ ತಿಳಿಸಿದರು.

ಈ ಮಳೆಯಿಂದಾಗಿ  ತುಂಗಭದ್ರಾ ನದಿಗೆ  ಸಣ್ಣ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನಗರದ ಜನತೆಗೆ ಸ್ವಲ್ಪ ಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆ   ಸದ್ಯಕ್ಕೆ ಇಲ್ಲದಂತೆ ಆಗಿದೆ ಎಂದು ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ತಿಳಿಸಿದರು.

ನಗರದ ಆಶ್ರಯ ಬಡಾವಣೆಯ ಕೊನೆಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಡ್ರೈನೇಜ್ ಸ್ವಚ್ಚತೆ ಮಾಡಿಸಿದ್ದು,   ಆಶ್ರಯ ಬಡಾವಣೆ ಜೊತೆಗೆ ಬೆಂಕಿನಗರ ಬಡಾವಣೆಯ ಜನತೆಯ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದರು.  

ಇನ್ನು ಬೆಸ್ಕಾಂ ಇಲಾಖೆಯ ಸಿಬ್ಬಂದಿಗಳು ವಿದ್ಯುತ್ ತಂತಿಗಳಿಗೆ ಅಡ್ಡಲಾಗಿ ಇರುವಂತಹ ಮರಗಳನ್ನು ಕಡಿಯುವ ಮೂಲಕ ವಿದ್ಯುತ್‌ ಸರಬರಾಜಿಗೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಹಾಗಾಗಿ   ಮಳೆ ಬಂದರೂ ಸಹಿತ ಇದುವರೆಗೂ ಯಾವುದೇ ರೀತಿಯ ಅವಘಡಗಳು ಸಂಭವಿಸಿರುವುದಿಲ್ಲ ಎಂದು ಪೌರಾಯುಕ್ತರು ತಿಳಿಸಿದರು.

error: Content is protected !!