ಚಿತ್ರದುರ್ಗ, ಮೇ 16 – ಇಲ್ಲಿನ ಮಾದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳು ಬಸವ ಜಯಂತಿಯಂದು ಬಾಲಕನೋರ್ವನನ್ನು ವಟುವಾಗಿ ಸ್ವೀಕರಿಸಿ, ಧಾರ್ಮಿಕ ವಿಧಿ ವಿಧಾನದಿಂದ ದೀಕ್ಷೆ ನೀಡಿ `ಜಯ ಬಸವ’ ಎಂದು ನಾಮಕರಣ ಮಾಡಿದ್ದಾರೆ.
ಎಸ್.ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಕಳಸದ್, ನಿರ್ದೇಶಕ ಡಾ. ಬಸವ ಕುಮಾರ ಸ್ವಾಮೀಜಿ, ಚಂದ್ರಶೇಖರ್, ವಿವಿಧ ಮಠದ ಶ್ರೀಗಳು ಮತ್ತು ಬಸವಾಭಿಮಾನಿಗಳಿದ್ದರು.