ಬಸವರಾಜ್‌ ಗುರೂಜಿಯಿಂದ ವಿಶೇಷ ಅಭಿಷೇಕ

ಬಸವರಾಜ್‌ ಗುರೂಜಿಯಿಂದ ವಿಶೇಷ ಅಭಿಷೇಕ

ದಾವಣಗೆರೆ, ಮೇ 16 – ನಗರದ ಶಿವಕುಮಾರಸ್ವಾಮಿ ಬಡಾವಣೆಯ ವೀರಾಂಜನೇಯ ಸ್ವಾಮಿ ಸಾರ್ವಜನಿಕ ಧ್ಯಾನ ಮಂದಿರದಲ್ಲಿ ಶನಿವಾರ ಹನುಮಾವತಾರಿ ಬಸವರಾಜ ಗುರೂಜಿ ಅವರು ವೀರಭದ್ರೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ಓಂಕಾರ ಗಣಪತಿ, ಸುಬ್ರಹ್ಮಣ್ಯಸ್ವಾಮಿ, ವರಾಹ ಭೀಮಾಶಂಕರ ಲಿಂಗುವಿಗೆ ವಿಶೇಷ ಗಂಗಾ ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕವನ್ನು ನೆರವೇರಿಸಿದರು.

ಎಸ್. ನಿರ್ಮಲಮ್ಮ ಮುರುಗೇಶಪ್ಪ, ಎಸ್. ಮಾಲಾ, ಚಂದ್ರಶೇಖರ್, ಎಂ. ಸ್ನೇಹಾ ಮತ್ತು ಜಿ.ವಿ. ಅನೂಪ್ ಅವರಿಗೆ ಪೂಜ್ಯರು  ಸನ್ಮಾನಿಸಿದರು.

ಎಸ್. ಶಿವಬಸಮ್ಮ, ಡಿ.ಎಸ್‌. ಭರತ್, ಪ್ರಕಾಶ್ ಹೊಸಮನಿ, ಸಂಗಪ್ಪ ತೋಟದ್, ಬಿ. ಗೀತಾ, ಎಂ. ಉದಯಕುಮಾರ್, ಬಿ. ಸಂತೋಷ ಕುಮಾರ್, ಬಿ. ಮಂಜಮ್ಮ, ಡಿ.ಪಿ. ಚೇತನ್‌ ಕುಮಾರ್ ಸೇರಿದಂತೆ ಇತ್ತಿತರಿರದ್ದರು.

error: Content is protected !!