ಸಂಸ್ಕೃತಿ ಉಳಿಸುವುದು ನಮ್ಮ ಕೈಯ್ಯಲ್ಲಿದೆ

ಸಂಸ್ಕೃತಿ ಉಳಿಸುವುದು ನಮ್ಮ ಕೈಯ್ಯಲ್ಲಿದೆ

ಹೊನ್ನಾಳಿ : ಅಕ್ಕಮಹಾದೇವಿ ಜಯಂತಿಯಲ್ಲಿ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ

ಹೊನ್ನಾಳಿ, ಮೇ 14 – ಸನಾತನ ಧರ್ಮ ಬಹಳ ವಿಶೇಷವಾಗಿದೆ.  ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಕೈಯ್ಯಲ್ಲಿದೆ ಎಂದು  ಹೊನ್ನಾಳಿಯ ಚನ್ನಮಲ್ಲಿಕಾರ್ಜುನ ಶ್ರೀಗಳು ಹೇಳಿದರು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್, ಮಹಿಳಾ ಕದಳಿ ವೇದಿಕೆಯಿಂದ ಇಲ್ಲಿನ ಹಿರೇಕಲ್ಮಠದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಹಾಗೂ ದತ್ತಿ ಉಪನ್ಯಾಸ, ಸುಸಂಸ್ಕೃತ ಸಂಸ್ಕಾರ ವೈಭವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ಸಂಸ್ಕಾರ ವೈಭವ ಕಾರ್ಯಕ್ರಮಗಳಿಂದ ಮಾತ್ರ ಯುವ ಪೀಳಿಗೆ ಸನಾತನ ಸಂಸ್ಕೃತಿ ಅರಿಯಲು ಸಾಧ್ಯ ಎಂದು ಶ್ರೀಗಳು ಹೇಳಿದರು.

`ಅಕ್ಕಮಹಾದೇವಿ ಅವರ ಜೀವನ ದೃಷ್ಟಿ’ ಎಂಬ ವಿಷಯ ಕುರಿತು ಪ್ರಾಚಾರ್ಯರಾದ ಎಂ. ಮಮತಾ ಮಾತನಾಡಿದರು. ದಾವಣಗೆರೆಯ ಪೂಲ್ ಚಂದ್ ದತ್ತಿ ಕಾರ್ಯಕ್ರಮದಲ್ಲಿ ಕಡದಕಟ್ಟಿ ತಿಮ್ಮಪ್ಪ ಅಕ್ಕಮಹಾದೇವಿ ಬಗ್ಗೆ ವಚನ ಗಾಯನ ನಡೆಸಿ ಕೊಟ್ಟರು.

ಕದಳಿ ಮಹಿಳಾ ವೇದಿಕೆ ತಾಲ್ಲೂಕು ಅಧ್ಯಕ್ಷೆ ಪ್ರತಿಮಾ, ಸಾಹಿತಿ ಸಂಗನಾಳಮಠ, ಶಾರದ ಕಣಗೊಟಗಿ, ಸಿದ್ಧಯ್ಯ, ಮುರುಗೇಂದ್ರಯ್ಯ, ಧನರಾಜ್,  ಎನ್‌.ಎಸ್ ರಾಜು, ಕದಳಿ ವೇದಿಕೆಯ ವೀಣಾ ಸುರೇಶ್, ಸುಮಾ ರವಿ, ಗೀತಾ ಹಿರೇಮಠ, ಚಂದ್ರಕಲಾ, ರಾಜೇಶ್ವರಿ ಇನ್ನಿತರರಿದ್ದರು.

error: Content is protected !!