ಹರಪನಹಳ್ಳಿ ತಾಲ್ಲೂಕಿನ ಕೆ. ಸಿ. ಸಾಗರ್ ರಾಜ್ಯಕ್ಕೆ 6 ನೇ ರ್ಯಾಂಕ್‌

ಹರಪನಹಳ್ಳಿ ತಾಲ್ಲೂಕಿನ ಕೆ. ಸಿ. ಸಾಗರ್ ರಾಜ್ಯಕ್ಕೆ 6 ನೇ ರ್ಯಾಂಕ್‌

ಹರಪನಹಳ್ಳಿ, ಮೇ 9- 2023-24ನೇ ಸಾಲಿನ ಎಸ್ಎಸ್ಎಲ್‌ಸಿ  ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ತಾಲ್ಲೂಕಿಗೆ  ಶೇ.  69.08 ರಷ್ಟು ಫಲಿತಾಂಶ ಬಂದಿದೆ. 

ವಿವಿಎಸ್ ಪ್ರೌಢಶಾಲೆ ವಿದ್ಯಾರ್ಥಿ ಸಾಗರ್ ಕೆ.ಸಿ. 620 ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ ಆರನೇ ರಾಂಕ್  ಗಳಿಸಿದ್ದಾರೆ.  ದ್ವಿತಿಯ ಸ್ಥಾನವನ್ನು ವಿವಿಎಸ್ ಶಾಲೆಯ ಪ್ರತೀಕ್ ಎಂ – 615  ಹಾಗೂ  ತೃತೀಯ ಸ್ಥಾನವನ್ನು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಅಪ್ಸಾನ ಬಾನು -613  ಪಡೆದಿರುತ್ತಾರೆ. ತಾಲ್ಲೂಕಿನ ಮಾಚೇನಳ್ಳಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಪ್ರೌಢಶಾಲೆ ನೂರಕ್ಕೆ ನೂರು ಫಲಿತಾಂಶ ಪಡೆದಿರುತ್ತದೆ.   

ರಾಂಕ್ ವಿದ್ಯಾರ್ಥಿಯನ್ನು  ಕ್ಷೇತ್ರ ಶಿಕ್ಷಣಾಧಿಕಾರಿ  ಯು.ಬಸವರಾಜಪ್ಪ,  ವಿಜಯನಗರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಅಭಿನಂದಿಸಿದ್ದಾರೆ.

error: Content is protected !!