ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸೇವಾ ಸಂಸ್ಥೆಯಿಂದ ಡಾ. ಪ್ರಭಾ ಪರ ಪಾದಯಾತ್ರೆ

ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸೇವಾ ಸಂಸ್ಥೆಯಿಂದ ಡಾ. ಪ್ರಭಾ ಪರ ಪಾದಯಾತ್ರೆ

ದಾವಣಗೆರೆ, ಮೆ 2 – ಕರ್ನಾಟಕ ರಾಜ್ಯ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸೇವಾ ಸಂಸ್ಥೆ ವತಿಯಿಂದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಗೆಲುವಿಗಾಗಿ ಪಾದಯಾತ್ರೆ ಮೂಲಕ ಮತಯಾಚಿಸಲಾಯಿತು. 

ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ,  ದರ್ಗಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿಲಾಯಿತು.  ರಾಜ್ಯ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸೇವಾ ಸಂಸ್ಥೆಯ ಅಧ್ಯಕ್ಷ ಬುತ್ತಿ ಹುಸೇನ್‌ ಪಾದಯಾತ್ರೆಯ ನೇತೃತ್ವ ವಹಿಸಿದ್ದರು.  

ಈ ಪಾದಯಾತ್ರೆಗೆ ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ  ಅಥಣಿ ವೀರಣ್ಣ  ಮತ್ತು ಜಿಲ್ಲಾ ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಸಂಸ್ಥೆಯ ಎಂ.ಡಿ. ಸಮೀವುಲ್ಲಾ, ಡೋಲಿ ಚಂದ್ರು, ಬಾಟ್ಲಿ ಶೇಕ್‌ ಅಹಮ್ಮದ್‌, ಈರುಳ್ಳಿ ನೂರುಲ್ಲಾ, ಧನುಷ್‌, ಜೆ.ಆರ್‌. ಕುಮಾರ್‌ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

error: Content is protected !!