ಗುಡ್ಡದಾನ್ವೇರಿಯಲ್ಲಿ ಗುಡ್ಡಾಪುರ ದಾನಮ್ಮ ಪ್ರವಚನ

ರಾಣೇಬೆನ್ನೂರು ತಾಲ್ಲೂಕಿನ ಗುಡ್ಡದಾನ್ವೇರಿ   ವಿರಕ್ತ ಮಠದಲ್ಲಿ  ಇಂದಿನಿಂದ 11ರವರೆಗೆ ಮುಂಡರಗಿ ಅನ್ನದಾನೇಶ್ವರ ಶ್ರೀಗಳ ಸಾನಿಧ್ಯ ದಲ್ಲಿ ಶ್ರೀ ಮಠದ ಪೀಠಾಧಿಪತಿ ಶ್ರೀ ಶಿವಯೋಗೀ ಶ್ವರ ಸ್ವಾಮಿಗಳ ನೇತೃತ್ವದಲ್ಲಿ ಶರಣೆ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ, ಜಂಗಮ ಜ್ಯೋತಿ ಶಿವಯೋಗಿಗಳ 71ನೇ ಜಾತ್ರೋತ್ಸವ ಹಾಗೂ ಶ್ರೀಗಳ 61ನೇ ಹುಟ್ಟುಹಬ್ಬದ ಕಾರ್ಯ ಕ್ರಮಗಳು  ನಡೆಯಲಿವೆ.  

ನೆಗಳೂರ ಹಿರೇಮಠದ ಶ್ರೀ ಗುರುಶಾಂತ ಶಿವಾ ಚಾರ್ಯರು, ಹಿರೇಮಠ ವೆಂಕಟಾಪುರದ ಶ್ರೀ ಗುರುಸಿದ್ದದೇವರು, ಹತ್ತಿ ಮತ್ತೂರು ಕರ್ಜಗಿ ಮಠದ ಶ್ರೀ ನಿಜಗುಣ ಶಿವಯೋಗಿಗಳು, ಗೋಲಗೆರೆ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಆಗಮಿಸುವರು.ಹಕ್ಕಂಡಿ ಕುದೇಂದ್ರ ಶಾಸ್ತ್ರಿಗಳು ಪ್ರತಿದಿನ ಸಂಜೆ ದಾನಮ್ಮದೇವಿ ಪ್ರವಚನ ನಡೆಸುವರು.

error: Content is protected !!