ದುಗ್ಗಮ್ಮ ದೇವಸ್ಥಾನದ ಬಳಿ ವಾರದ ಸಂತೆ ನಡೆಸಲು ಒತ್ತಾಯ

ದಾವಣಗೆರೆ, ಮೇ 2- ನಗರದ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಬಳಿ 5 ವಾರ ಸಂತೆ ನಡೆಸುವಂತೆ ಹಿರಿಯ ಮುಖಂಡ ಜೆ. ಸೋಮನಾಥ್ ಮತ್ತು ಜಿಲ್ಲಾ ಜೆಡಿಎಸ್ ಮುಖಂಡ ಎಂ.ಎನ್. ನಾಗರಾಜ್ ಅವರುಗಳು ಮಹಾ ನಗರ ಪಾಲಿಕೆ ಆಯುಕ್ತರು ಮತ್ತು ದೇವಸ್ಥಾನ ಸಮಿತಿ ಧರ್ಮ ದರ್ಶಿಗಳಲ್ಲಿ ಮನವಿ ಮಾಡಿದ್ದಾರೆ.  

ಮಳೆ ಬಾರದೆ, ಬರಗಾಲ ದಿಂದಾಗಿ ನೀರಿನ ಹಾಹಾಕಾರದ ಜೊತೆಗೆ ಬಿಸಿಲಿನ ತಾಪವೂ ಹೆಚ್ಚಾ ಗಿದ್ದು, ಬೇರೆಡೆ ಮಳೆ ಬರುತ್ತಿದೆ ಆದರೆ ನಗರದಲ್ಲಿ ಮಾತ್ರ ಮಳೆ ಆಗುತ್ತಿಲ್ಲ ಹಾಗಾಗಿ ಮನುಷ್ಯರ ಜೊತೆಗೆ ಪ್ರಾಣಿ ಪಕ್ಷಿಗಳೂ ಕಂಗಾ ಲಾಗಿವೆ.    ಕೂಡಲೇ ದೇವಸ್ಥಾನದ ಬಳಿ ಸಂತೆ ನಡೆಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕಿದೆ  ಎಂದು ಸೋಮನಾಥ್ ಮತ್ತು ನಾಗರಾಜ್ ತಿಳಿಸಿದ್ದಾರೆ.

error: Content is protected !!