ಮಲೇಬೆನ್ನೂರು, ಏ. 29 – ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸಭಾ ಭವನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕಾಂತಾನಂದ ಭಗವಾನ್ ಸರಸ್ವತಿ ಮಹಾರಾಜರ ನೇತೃತ್ವದಲ್ಲಿ ನಡೆದ ರುದ್ರಪಾರಾಯಣದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿತ್ರ ನಟ ಹಾಗೂ ಭರತ ನಾಟ್ಯ ಕಲಾವಿದ ಶ್ರೀಧರ್ ಅವರು ನಡೆಸಿಕೊಟ್ಟ ಭರತನಾಟ್ಯ ಸಂಗೀತ ನೃತ್ಯಗಳು ಎಲ್ಲರ ಗಮನ ಸೆಳೆದವು. ಇದಕ್ಕೂ ಮುನ್ನ ಬೆಂಗಳೂರಿನ ಡಾ. ರೇಖಾ ರಾಮಚಂದ್ರಮೂರ್ತಿ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವೂ ಮನಸೂರೆಗೊಂಡಿತು.
ಮಲೇಬೆನ್ನೂರು : ಗಮನ ಸೆಳೆದ ನಟ ಶ್ರೀಧರ್ ಭರತನಾಟ್ಯ
![19 sridhar bharatanatya 30.04.2024 ಮಲೇಬೆನ್ನೂರು : ಗಮನ ಸೆಳೆದ ನಟ ಶ್ರೀಧರ್ ಭರತನಾಟ್ಯ](https://janathavani.com/wp-content/uploads/2024/04/19-sridhar-bharatanatya-30.04.2024.jpg)