ಗೋ ಬ್ಯಾಕ್ ಮೋದಿ, ಪ್ರಜ್ವಲ್ ರೇವಣ್ಣ ಮಿತ್ರ ಮೋದಿಗೆ ಧಿಕ್ಕಾರ

ಗೋ ಬ್ಯಾಕ್ ಮೋದಿ, ಪ್ರಜ್ವಲ್ ರೇವಣ್ಣ ಮಿತ್ರ ಮೋದಿಗೆ ಧಿಕ್ಕಾರ

ಜಿಲ್ಲಾ ಕಾಂಗ್ರೆಸ್ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ

ದಾವಣಗೆರೆ, ಏ28- ನಗರಕ್ಕೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿ ದ್ದಂತೆಯೇ ಜಿಲ್ಲಾ ಕಾಂಗ್ರೆಸ್‌ನ ಮುಖಂಡರು ಹಾಗೂ ಎನ್‌ಎಸ್‌ ಯುಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ, `ಗೋ ಬ್ಯಾಕ್ ಮೋದಿ’, `ಪ್ರಜ್ವಲ್ ರೇವಣ್ಣ ಮಿತ್ರ ಮೋದಿ’ಗೆ ದಿಕ್ಕಾರವೆಂದು ಪ್ರತಿಭಟನೆ ಮಾಡುತ್ತಾ ಮೋದಿ ಕಾರ್ಯಕ್ರಮದಡೆಗೆ ಹೋಗಲು ಮುಂದಾದಾಗ ಪೊಲೀಸರು ಅವರನ್ನು ಬಂಧಿಸಿದ ಘಟನೆ ನಡೆಯಿತು.

ಪ್ರತಿಭಟನೆಯು ಶಾಮನೂರು ರಸ್ತೆಯಿಂದ ಆರಂಭಿಸಿ, ಹದಡಿ ರಸ್ತೆಯ ಅಂಬೇಡ್ಕರ್ ವೃತ್ತದವರೆಗೆ ಬರುತ್ತಿದ್ದಂತೆಯೇ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ, ವಿದ್ಯಾನಗರ ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆ ಮಾಡಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್, ಎ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಅಲಿ ರೆಹಮತ್ ಪೈಲ್ವಾನ್, ಗಿರಿಧರ್ ಸತಾಲ್, ಕೆ.ಎಂ.ಮಂಜುನಾಥ್, ಜಮೀರ್, ಮಾರುತಿ ಹರಿಹರ, ಡಿ.ಎಲ್.ನಾಗರಾಜ್, ತಾಹೀರ್, ಸಮೀರ್, ರೆಹಮಾನ್ ಇನ್ನೂ ಮುಂತಾದವರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಯಿತು.

error: Content is protected !!