ಹರೀಶ್ ಆರೋಪದಲ್ಲಿ ಹುರುಳಿಲ್ಲ: ಅದು ಮರಳಲ್ಲ

ದಾವಣಗೆರೆ, ಏ.21-  ವಿಜಯನಗರ ಜಿಲ್ಲಾ ವ್ಯಾಪ್ತಿಯ ಚಿಕ್ಕಬಿದರೆ ಗ್ರಾಮದಲ್ಲಿ ಅಕ್ರಮ ವಾಗಿ ಮರಳು ಸಂಗ್ರಹಿಸಲಾಗಿದೆ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಹರಿಹರ ನಗರಸಭೆ ಸದಸ್ಯ ಎಬಿಎಂ ವಿಜಯ್ ಕುಮಾರ್ ಹೇಳಿದ್ದಾರೆ.

ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹರೀಶ್ ಹೇಳಿರುವಂತೆ ಆ ಸ್ಥಳದಲ್ಲಿರುವುದು ಮರಳಲ್ಲ, ನದಿಯಲ್ಲಿ ಹೂಳು ತೆಗೆದಿರುವ ಮಣ್ಣು. ಅದು ಸರ್ಕಾರದ ಆಸ್ತಿ ಯಾಗಿದ್ದು, ಅದಕ್ಕೂ ನನಗೂ ಹಾಗೂ ಸಚಿವ ಮಲ್ಲಿಕಾರ್ಜುನ್ ಅವರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ನಂದಿಗಾವಿ, ರಜನಿಕಾಂತ್, ವಕೀಲರಾದ ಆನಂದ್ ಇದ್ದರು.

error: Content is protected !!