ರಾಜವೀರ ಮದಕರಿ ನಾಯಕ ವೃತ್ತದ ಬಸ್ ತಂಗುದಾಣ ಕಾಮಗಾರಿ ಕಳಪೆ

ರಾಜವೀರ ಮದಕರಿ ನಾಯಕ ವೃತ್ತದ  ಬಸ್ ತಂಗುದಾಣ ಕಾಮಗಾರಿ ಕಳಪೆ

ದಾವಣಗೆರೆ, ಏ. 21 – ದಾವಣಗೆರೆ ನಗರಕ್ಕಾಗಲೀ, ಜಿಲ್ಲೆಗಾಗಲೀ ಯಾವುದೇ ಅನುದಾನ ತರದ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಕಾಂಗ್ರೆಸ್ ಅನುದಾನವನ್ನು ಬಳಸಿ ಕೊಂಡು ನಾವೇ ಅನುದಾನ ತಂದಿದ್ದೇವೆ ಎಂದು ನಂಬಿಸಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ದೂರಿದೆ.

ಇದಕ್ಕೆ ನಿದರ್ಶನವೆಂಬಂತೆ ನಗರದ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಬಸ್ ತಂಗುದಾಣವು ನಿನ್ನೆ ಬೀಸಿದ ಗಾಳಿಗೆ ಬಿದ್ದಿದೆ. ಇದನ್ನು ನೋಡಿದರೆ ಸಂಸದರ ಇಚ್ಛಾಶಕ್ತಿ ಗೊತ್ತಾಗಲಿದೆ ಎಂದು ಲೇವಡಿ ಮಾಡಿದ್ದಾರೆ.

ಸಂಸದ ಸಿದ್ದೇಶ್ವರ ಅವರು ಮಾಡಿರುವ ಕೆಲಸಗಳು ಬೆರಳೆಣಿಕೆಯಷ್ಟು ಮಾತ್ರ. ಅವು ಸಹ ಸಂಪೂರ್ಣ ಕಳಪೆಯಿಂದ ಕೂಡಿವೆ. ಇದಕ್ಕೆ ಇಂದು ಬಸ್ ತಂಗುದಾಣ ಸೇರಿದೆ. ಡಿಸಿಎಂ ಬಳಿಯ ಕೆಳ ಸೇತುವೆ, ಶಿರಮಗೊಂಡನಹಳ್ಳಿ ಮತ್ತು ಅಶೋಕ ರಸ್ತೆಯ ಕೆಳ ಸೇತುವಗಳು ಸಂಸದರ ಪ್ರಬುದ್ಧತೆಗೆ ಸಾಕ್ಷಿ ಎಂದು ಕಾಂಗ್ರೆಸ್ ಟೀಕಿಸಿದೆ.

error: Content is protected !!