ನಗರದಲ್ಲಿ ಇಂದು `ಶಿಕ್ಷಣದಲ್ಲಿ ರಂಗ ಕಲೆ’ ಕಾರ್ಯಾಗಾರ

ಬಿ.ಇ.ಎ. ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಇಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ `ಶಿಕ್ಷಣದಲ್ಲಿ ರಂಗ ಕಲೆ’ ಕಾರ್ಯಾಗಾರ ಹಮ್ಮಿಕೊಳ್ಳ ಲಾಗಿದೆ. ಮಹಾವಿದ್ಯಾಲಯದ ಆಡಳಿತಾಧಿಕಾರಿ ಪ್ರೊ. ವೈ. ವೃಷಭೇಂದ್ರಪ್ಪ ಕಾರ್ಯಾಗಾರ ಉದ್ಘಾಟಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಮಾಳೂರಿನ ಉಪನ್ಯಾಸಕ ಡಾ. ಸಾಸ್ವೆಹಳ್ಳಿ ಸತೀಶ್ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗ ಳಾಗಿ ಸೋಮಿನಕೊಪ್ಪ ಸಹ ಶಿಕ್ಷಕ ಅಣ್ಣಪ್ಪ ಒಂಟಿ ಮಾಳಗಿ, ಬಿಇಎ ಶಿಕ್ಷಣ ಕಾಲೇಜಿನ ಸಹಾಯಕ ಪ್ರಾಧ್ಯಾ ಪಕ ಕೆ. ಮುರುಗೇಶಿ ಭಾಗವಹಿಸಲಿದ್ದು, ಪ್ರಾಚಾರ್ಯ ರಾದ ಡಾ.ಎ.ಜೆ. ನೀತಾ ಅಧ್ಯಕ್ಷತೆ ವಹಿಸಲಿದ್ದಾರೆ. 

error: Content is protected !!