ಮಹಿಳೆಯರಿಗೆ ಸ್ಥಾನಮಾನ ಕೊಡಿಸಿದ್ದು ಎಸ್ಸೆಸ್

ಮಹಿಳೆಯರಿಗೆ ಸ್ಥಾನಮಾನ ಕೊಡಿಸಿದ್ದು ಎಸ್ಸೆಸ್

ಚುನಾವಣೆ ಹಿನ್ನೆಲೆ : ಅವರಿಗೆ ಅಗೌರವ ತರುವ ಹೇಳಿಕೆ – ಮಹಿಳಾ ಕಾಂಗ್ರೆಸ್ 

ದಾವಣಗೆರೆ, ಏ.3- ಹಿರಿಯ ಶಾಸಕ ಶಾಮ ನೂರು ಶಿವಶಂಕರಪ್ಪ ಅವರಿಗೆ ಮಹಿಳೆಯರ ಮೇಲೆ ಅಪಾರ ಗೌರವವಿದೆ. ಜಿಲ್ಲೆಯಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ ಮಾನ ಕೊಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾ ಬಾಯಿ ಮಾಲತೇಶರಾವ್ ಜಾಧವ್ ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಶಿವಶಂಕರಪ್ಪನವರು ತಮ್ಮ ಮನೆಯ ಸೊಸೆಯನ್ನು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಅನುವು ಮಾಡಿಕೊಟ್ಟಿ ದ್ದಾರೆ. ಅಂತವರು ಮಹಿಳೆಯರನ್ನು ಅಗೌರವದಿಂದ ಕಾಣುತ್ತಾರೆ ಎನ್ನುವುದು ತಪ್ಪು ಕಲ್ಪನೆ ಎಂದರು.

ಮಹಿಳೆಯರ ಬಗ್ಗೆ ಅಗೌರವ ನೀಡುವಂತಹ ಹೇಳಿಕೆಯನ್ನು ಅವರು ನೀಡಿಯೇ ಇಲ್ಲ. ಚುನಾವಣೆ ಹಿನ್ನೆಲೆ ಯಲ್ಲಿ ಅವರಿಗೆ ಅಗೌರವ ಉಂಟು ಮಾಡುವ ಉದ್ದೇಶದಿಂದ ಅವರ ಹೇಳಿ ಕೆಯನ್ನು ಬದಲಿಸಿ ಪ್ರಚಾರ ಮಾಡ ಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿಯವರು ಅನಗತ್ಯವಾಗಿ ಶಿವಶಂಕರಪ್ಪ ನವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ನಡೆಸಿದ ಭ್ರಷ್ಟಚಾರ ಹಗರಣ ಗಳ ಬಗ್ಗೆ ಎಲ್ಲಾ ವೃತ್ತ ಹಾಗೂ ವಾರ್ಡ್‌ಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗರತ್ನಮ್ಮ, ಅಶ್ವಿನಿ, ಮಂಗಳ, ಕವಿತಾ ಚಂದ್ರಶೇಖರ್, ರಾಜೇಶ್ವರಿ, ಕಾವ್ಯ, ಉಮಾ ಕುಮಾರ್, ಸಲ್ಮಾ ಉಪಸ್ಥಿತರಿದ್ದರು.

error: Content is protected !!